ಬೆಂಗಳೂರು: ಧರ್ಮಸ್ಥಳ ಕುರಿತಾಗಿ ದಿನಕ್ಕೊಂದು ಕಥೆಗಳು ಸೃಷ್ಟಿ ಆಗ್ತಿವೆ. ಆ ಕಥೆಗೆ ಬರೀ ರೆಕ್ಕೆಪುಕ್ಕಗಳು ಮಾತ್ರ ಸಿಗ್ತಿವೆ. ಅನಾಮಿಕ ಹೇಳ್ದಂತೆ ಯಾವುದೇ ಕುರುಹುಗಳು ಸಿಕ್ಕಿಲ್ಲ. ಇದು ಧರ್ಮಸ್ಥಳದ ಭಕ್ತರ ಆಕ್ರೋಶಕ್ಕೆ ಕಾರಣ ಆಗಿದೆ. ಇದರ ನಡುವೆ ʻಧರ್ಮಸ್ಥಳದ ಮಂಜುನಾಥನನ್ನು ರಕ್ಷಿಸಿʼ
Advertisement
ಎಂದು ಜೆಡಿಎಸ್ ಶಾಸಕ ಶರಣುಗೌಡ ಕಂದಕೂರ್ ಪೋಸ್ಟರ್ ಹಿಡಿದು ವಿಧಾನಸೌಧಕ್ಕೆ ಬಂದಿದ್ದರು. ಸ್ವಾಮಿ ಮಂಜುನಾಥನನ್ನು ರಕ್ಷಿಸಿ, ಅಪಪ್ರಚಾರಿಗಳನ್ನು ಶಿಕ್ಷಿಸಿ, ಸತ್ಯಮೇವ ಜಯತೆ ಎಂದು ಪೋಸ್ಟರ್ನಲ್ಲಿ ಬರೆಯಲಾಗಿತ್ತು.
ಇನ್ನೂ ಧರ್ಮಸ್ಥಳದಲ್ಲಿ ನಡೆದ ತನಿಖೆಗಳು, ಗುಂಡಿಯೊಳಗಿನ ಸತ್ಯ, ವಿಚಾರಣೆಯಲ್ಲಿ ಬಯಲಾದ ಮಾಹಿತಿಗಳು, ಎಲ್ಲವನ್ನ ವರದಿ ರೂಪಕ್ಕೆ ಬದಲಿಸಿರೋ ಎಸ್ಐಟಿ ಮುಖ್ಯಸ್ಥರು, ಇಂದು ಸರ್ಕಾರದ ಮುಂದೆ ರಿಪೋರ್ಟ್ ತೆರೆದಿಡಲಿದ್ದಾರೆ. ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಗೃಹಸಚಿವ ಪರಮೇಶ್ವರ್ಗೆ ಮಧ್ಯಂತರ ವರದಿ ಸಲ್ಲಿಸಲಿದ್ದಾರೆ.