ವಿಜಯಸಾಕ್ಷಿ ಸುದ್ದಿ, ಗದಗ
ಪತ್ನಿಯ ಅನೈತಿಕ ಸಂಬಂಧ ಕುರಿತು ಪ್ರಶ್ನಿಸಿದ್ದಕ್ಕೆ ಪತ್ನಿ, ಆಕೆಯ ತಾಯಿ, ಪ್ರಿಯಕರ ಸೇರಿ ಹಲ್ಲೆ ನಡೆಸಿದ್ದರಿಂದ ಮನನೊಂದು ಮಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರೇಣವ್ವ ಪೂಜಾರ ಎಂಬುವವರು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗದಗ ತಾಲೂಕಿನ ಹೊಂಬಳ ಗ್ರಾಮದ
ಸಂಜೀವ ಜಾಂಬವಂತ ಪೂಜಾರ ಎಂಬುವವರು ಹತ್ತು ವರ್ಷಗಳ ಹಿಂದೆ ಅದೇ ಗ್ರಾಮದ ಕಲ್ಪನಾ ಎಂಬುವಳನ್ನು ಮದುವೆ ಆಗಿ ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದರು.
ಸಂಜೀವ ಜು.11ರಂದು ರಾತ್ರಿಗೆ ಮನೆಗೆ ಬಂದಾಗ ಹೆಂಡತಿ ಕಲ್ಪನಾ ರಾಜು ಬಣಕಾರ ಎಂಬಾತನೊಂದಿಗೆ ಸಲುಗೆಯಿಂದ ಇರುವುದನ್ನು ಕಂಡು ಇದನ್ನು ಕಲ್ಪನಾಳ ತಾಯಿ ನಿಂಗವ್ವಳಿಗೆ ತಿಳಿಸಿದ್ದಾನೆ. ಆದರೆ, ನಿಂಗವ್ವ, ಕಲ್ಪನಾ, ರಾಜು ಬಣಕಾರ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.
ಇದರಿಂದ ಹೆದರಿದ ಸಂಜೀವ ರಾತ್ರಿ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಮಲಗಿ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗನ ಸಾವಿಗೆ ಕಲ್ಪನಾ ಸಂಜೀವ ಪೂಜಾರ, ರಾಜು ಬಣಕಾರ, ನಿಂಗವ್ವ ಪೂಜಾರ ಅವರೇ ಕಾರಣ ಎಂದು ಮೃತನ ತಾಯಿ ರೇಣವ್ವ ಪೂಜಾರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.