ಷೇರುದಾರ ರೈತರಿಗೆ ತಾಡಪಾಲ್ ವಿತರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕರ್ನಾಟಕ ಸರ್ಕಾರದ ಸಂಜೀವಿನಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗದಗ ತಾಲೂಕಾ ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕ ಕಂಪನಿಯಿಂದ ಉತ್ತಮ ಗುಣಮಟ್ಟದ ಹಾಗೂ ಕಡಿಮೆ ಬೆಲೆಯ ತಾಡಪಾಲುಗಳನ್ನು ಇಲ್ಲಿಯ ಷೇರುದಾರ ರೈತರಿಗೆ ವಿತರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮಡೇಶ ಮಲ್ಲಿಮಾರ, ರೈತರಿಂದ ರೈತರಿಗಾಗಿ ಹುಟ್ಟಿದ ಈ ಕಂಪನಿ ರೈತರ ಕಲ್ಯಾಣಕ್ಕಾಗಿ ದುಡಿದು ಅವರನ್ನು ಉನ್ನತ ಮಟ್ಟಕ್ಕೆ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಕಂಪನಿಯ ನಿರ್ದೇಶಕಿ ಚಂದ್ರಕಲಾ ಮಾಡಲಗೇರಿ ಮಾತನಾಡಿ, ರೈತರಿಗೆ ಅವಶ್ಯಕವಾದ ಎಲ್ಲಾ ಕೃಷಿ ಸಲಕರಣೆಗಳು ಹಾಗೂ ವಸ್ತುಗಳನ್ನು ಉತ್ತಮ ಗುಣಮಟ್ಟದಲ್ಲಿ ಮತ್ತು ಕೈಗೆಟುಕುವ ಬೆಲೆಗೆ ಒದಗಿಸಲು ಕಂಪನಿ ಸದಾ ಮುಂದುವರಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗದಗ ಜಿಲ್ಲಾ ವ್ಯವಸ್ಥಾಪಕ ಮಡೇಶ ಮಲ್ಲಿಮಾರ, ತಾಲೂಕಾ ವ್ಯವಸ್ಥಾಪಕ ಸಿದ್ದು ಸತ್ಯಣ್ಣವರ, ಲಕ್ಕುಂಡಿ ಗ್ರಾ.ಪಂ ಒಕ್ಕೂಟದ ಅಧ್ಯಕ್ಷೆ ಕಸ್ತೂರೆವ್ವ ಗುಂಜಾಳ, ಶೈಲಾ ಅಂಬಕ್ಕಿ, ನೀಲಮ್ಮ ಬೇಲೇರಿ, ಸುಶೀಲಾ ಉಮಚಗಿ, ರೇಣುಕಾ ಉಮಚಗಿ, ಕಂಪನಿ ಸಿಇಓ ರಮೇಶ ಭಂಡಾರಿ, ಬಸಪ್ಪ ಗಡಾದ, ರೈತ ಉತ್ಪಾದಕ ಕಂಪನಿಯ ಸಿಬ್ಬಂದಿಗಳು, ಜಿಎಫ್‌ಎಲ್ ಸಿಬ್ಬಂದಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here