HomeGadag News60 ವರ್ಷದ “ಅಸ್ತಮಾ ಯಜ್ಞ”ಕ್ಕೆ ಭಾರೀ ಜನಸ್ತೋಮ: ಲಕ್ಷ್ಮೇಶ್ವರದಲ್ಲಿ ಆಯುರ್ವೇದದ ಮಹೋತ್ಸವ

60 ವರ್ಷದ “ಅಸ್ತಮಾ ಯಜ್ಞ”ಕ್ಕೆ ಭಾರೀ ಜನಸ್ತೋಮ: ಲಕ್ಷ್ಮೇಶ್ವರದಲ್ಲಿ ಆಯುರ್ವೇದದ ಮಹೋತ್ಸವ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಆರು ದಶಕಗಳಿಂದ ಅಸ್ತಮಾ ರೋಗಿಗಳಿಗೆ ಉಚಿತ ಆಯುರ್ವೇದ ಔಷಧಿ ವಿತರಿಸುತ್ತಿರುವ ಲಕ್ಷ್ಮೇಶ್ವರದ ಐತಿಹಾಸಿಕ “ಅಸ್ತಮಾ ಯಜ್ಞ” ಈ ವರ್ಷವೂ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೋಗಿಗಳು ಹಾಗೂ ಸಾರ್ವಜನಿಕರ ಭಾರೀ ಜನಸ್ತೋಮ ಕಾರ್ಯಕ್ರಮದ ವಿಶೇಷತೆ ಆಗಿತ್ತು.

ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ನಂ.1ರ ಆವರಣದಲ್ಲಿ ಸೋಮವಾರ ನಡೆದ 60ನೇ ವರ್ಷದ ಅಸ್ತಮಾ ಯಜ್ಞ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕುಂದಗೋಳದ ಶ್ರೀ ಬಸವಣ್ಣಜ್ಜನವರು, ದಿವಂಗತ ವೈದ್ಯ ಬಾಬುರಾವ್ ಕುಲಕರ್ಣಿ ಅವರ ಸೇವಾ ಮನೋಭಾವವನ್ನು ಕೊಂಡಾಡಿದರು.

ಆಯುರ್ವೇದ ಔಷಧಿ ಪುರಾತನ ಕಾಲದಿಂದಲೂ ಜನಜೀವನದ ಭಾಗವಾಗಿದ್ದು, ಗಿಡಮೂಲಿಕೆಗಳಿಂದ ನೀಡುವ ಚಿಕಿತ್ಸೆ ಮೂಲಕ ಸಾವಿರಾರು ಜನರು ಗುಣಮುಖರಾಗಿದ್ದಾರೆ. ಇಂತಹ ಔಷಧಿಯ ಮೂಲಕ ಲಕ್ಷ್ಮೇಶ್ವರ ಪಟ್ಟಣದ ಕೀರ್ತಿಯನ್ನು ರಾಜ್ಯಾದ್ಯಂತ ಹರಡಿಸಿದ ದಿ. ವೈದ್ಯ ಬಾಬುರಾವ್ ಕುಲಕರ್ಣಿ ಅವರ ಸೇವೆ ಸದಾ ಸ್ಮರಣೀಯ ಎಂದು ಅವರು ಹೇಳಿದರು.

ಯಾವುದೇ ಫಲಾಪೇಕ್ಷೆಯಿಲ್ಲದೆ 60 ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ ವಿತರಿಸುತ್ತಿರುವುದು ಈ ಭಾಗದ ಹೆಮ್ಮೆಯ ಸಂಗತಿ. ಕಾರ್ಯಕ್ರಮಕ್ಕೆ ಹರಿದು ಬಂದಿರುವ ಜನಸ್ತೋಮವೇ ಈ ಔಷಧಿಯ ಮೇಲಿನ ನಂಬಿಕೆ ಮತ್ತು ಮಹತ್ವವನ್ನು ತೋರಿಸುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಪಿಎಸ್‌ಐ ನಾಗರಾಜ ಗಡದ ಮಾತನಾಡಿ, ಮೃಗಶಿರಾ ಮಳೆಯ ನಕ್ಷತ್ರದ ಸಂದರ್ಭದಲ್ಲಿ ನೀಡಲಾಗುವ ಈ ಔಷಧಿಯಿಂದ ಲಕ್ಷಾಂತರ ಜನರು ಪರಿಹಾರ ಕಂಡುಕೊಂಡಿದ್ದಾರೆ ಎಂದರು.

ಮೃಗಶಿರಾ ನಕ್ಷತ್ರದ ಸಂದರ್ಭದಲ್ಲಿ ವಾತಾವರಣದಲ್ಲಿ ಉಂಟಾಗುವ ಬದಲಾವಣೆ ಹಾಗೂ ಆಯುರ್ವೇದ ಔಷಧಿಯ ಗುಣಗಳಿಂದ ಈ ಚಿಕಿತ್ಸೆಗೆ ವಿಶೇಷ ಮಹತ್ವ ಬಂದಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಸರ್ಪಭೂಷಣ ಮಹಾಸ್ವಾಮಿಗಳು, ಅಮೋಘಿಮಠದ ಶ್ರೀಗಳು ಉಪಸ್ಥಿತರಿದ್ದರು. ಹುಬ್ಬಳ್ಳಿ ಆಯುರ್ವೇದಿಕ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಬಿ. ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯರಾದ ಪಲ್ಲಣ್ಣನವರು ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಡಾ. ಹರೀಶ ಕುಲಕರ್ಣಿ, ವ್ಹಿ.ಜಿ. ಪಡಗೇರಿ, ನಿಂಗಪ್ಪ ಬನ್ನಿ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಗೋಪಾಲ ಪಡ್ನೀಸ್, ನಿಂಗಪ್ಪ ತಹಸೀಲ್ದಾರ, ಅನಿಲ ಕುಲಕರ್ಣಿ, ಎಂ.ಆರ್. ಪಾಟೀಲ, ಡಾ. ಮಂಗಸೂಳಿ, ಶಂಕ್ರಪ್ಪ ತಹಸೀಲ್ದಾರ ಹಾಗೂ ಮಂತ್ರಾಲಯ ಪಾದಯಾತ್ರಾ ಸಂಘದ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೃಷ್ಣ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಡಿ.ಎಂ. ಪೂಜಾರ ವಂದಿಸಿದರು.

“ಸಮಾಜ ಸೇವೆಯ ಮನೋಭಾವ ಎಲ್ಲರಲ್ಲೂ ಬರೋದಿಲ್ಲ. ದಿ. ವೈದ್ಯ ಬಾಬುರಾವ್ ಕುಲಕರ್ಣಿ ಅವರು 60 ವರ್ಷಗಳಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಅಸ್ತಮಾ ರೋಗಿಗಳಿಗೆ ಔಷಧಿ ನೀಡುತ್ತಿರುವುದು ನಿಜಕ್ಕೂ ಮಾದರಿಯ ಸೇವೆ”

ಕುಂದಗೋಳದ ಶ್ರೀ ಬಸವಣ್ಣಜ್ಜನವರು

“ಮೃಗಶಿರಾ ನಕ್ಷತ್ರದಲ್ಲಿ ನೀಡುವ ಈ ಔಷಧಿಯಿಂದ ಲಕ್ಷಾಂತರ ಜನರು ಗುಣಮುಖರಾಗಿದ್ದಾರೆ. ಇಲ್ಲಿನ ಜನಸ್ತೋಮವೇ ಅದರ ಮಹತ್ವಕ್ಕೆ ಸಾಕ್ಷಿ”

ಪಿಎಸ್‌ಐ ನಾಗರಾಜ ಗಡದ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!