ಕರವೇ ಜಿಲ್ಲಾ ಉಪಾಧ್ಯಕ್ಷರ ಉಚ್ಛಾಟನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕ ಸುಮಾರು 20 ವರ್ಷಗಳ ಕಾಲ ಸಂಘಟನೆ ಗಟ್ಟಿಗೊಳಿಸುತ್ತಾ ಬಂದಿದ್ದು, ಟಿ.ಎ. ನಾರಾಯಣಗೌಡ್ರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡದ ನೆಲ-ಜಲ, ಭಾಷೆ, ಗಡಿ ಯಾವುದೇ ವಿಚಾರದಲ್ಲಿ ಮುನ್ನುಗ್ಗುವ ಸಂಘಟನೆಯಾಗಿದೆ. ಸಂಘಟನೆಯ ತತ್ವ-ಸಿದ್ಧಾಂತಗಳಿಗೆ ವಿರೋಧವಾಗಿ ನಡೆದುಕೊಂಡು ಸಂಘಟನೆಗೆ ಕಳಂಕ ತರುವಂತಹ ಜಿಲ್ಲಾ ಉಪಾಧ್ಯಕ್ಷ ವಿನಾಯಕ ಬದಿ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದ ವತಿಯಿಂದ ನ. 15ರಂದು ಉಚ್ಛಾಟನೆ ಮಾಡಲಾಗಿದೆ.

Advertisement

ಕರ್ನಾಟಕ ರಕ್ಷಣಾ ವೇದಿಕೆಗೆ ಇಂದಿನಿಂದು ಈ ವ್ಯಕ್ತಿ ಯಾವುದೇ ರೀತಿಯಲ್ಲಿಯೂ ಸಂಘಟನೆಯ ಪರವಾಗಿರುವುದಿಲ್ಲವೆಂದು ಕರವೇ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್.ಅಬ್ಬಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here