ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಅನ್ವರ್ ಎಚ್. ಬಾಗೇವಾಡಿ ಇವರ ನೇತೃತ್ವದಲ್ಲಿ ಗದಗ ಜಿಲ್ಲಾ ವಕ್ಫ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಎಲ್ಲಾ ಆಸ್ತಿಗಳನ್ನು ಉಮ್ಮಿದ್ ಪೋರ್ಟಲ್ ತಂತ್ರಾಂಶದಲ್ಲಿ ನಮೂದಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು. ಅದರಂತೆ ಕರ್ನಾಟಕದ 31 ಜಿಲ್ಲೆಗಳಲ್ಲಿ ಪ್ರಥಮವಾಗಿ ಗದಗ ಜಿಲ್ಲೆಯ ವಕ್ಫ್ ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಗಲು-ರಾತ್ರಿ ಮತ್ತು ರಜಾ ದಿನಗಳಲ್ಲಿ ಸುದೀರ್ಘವಾಗಿ ಕೆಲಸ ನಿರ್ವಹಿಸಿ ಜಿಲ್ಲೆಯ ವಕ್ಫ್ ಸಂಸ್ಥೆಗೆ ನೋಂದಣಿ ಇರುವ ಎಲ್ಲ ಆಸ್ತಿಗಳನ್ನು ಅವಧಿ ಪೂರ್ಣಗೊಳ್ಳುವ ಮುಂಚಿತವಾಗಿ ತಂತ್ರಾಂಶದಲ್ಲಿ ನಮೂದಿಸಿ ರಾಜ್ಯಕ್ಕೆ ಪ್ರಥಮವೆಂದು ಕೀರ್ತಿ ತಂದಿದ್ದಾರೆ.
ಸನ್ಮಾನ ಕಾರ್ಯಕ್ರಮದಲ್ಲಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್. ಸೋಂಪುರ, ಕಾರ್ಯದರ್ಶಿ ಎ.ಆರ್. ಕೊಪ್ಪಳ, ಖಜಾಂಚಿ ಎಂ.ಆರ್. ನಾರಾಯಣಕೇರಿ, ಸದಸ್ಯರುಗಳಾದ ಡಿ.ಎಫ್. ಮಲಸಮುದ್ರ, ಎ.ಕೆ. ಮುಲ್ಲಾ, ಎಂ.ಎನ್. ಬಿಜಾಪುರ, ಎಂ.ಜೆ. ಕದಡಿ, ಎಚ್.ಜಿ. ಕಾಗದಗಾರ, ಎ.ಜಿ. ದಂಡಿನ, ಎಸ್.ಎಂ. ಮಾಳೆಕೊಪ್ಪ, ನ್ಯಾಯವಾದಿಗಳಾದ ಎಂ.ಎ. ಮೌಲ್ವಿ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್. ಕೊಪ್ಪಳ ಹಾಗೂ ಶಹರ/ಗ್ರಾಮೀಣ ಭಾಗದ ಮುಖಂಡರು, ಅಂಜುಮನ್ ಸದಸ್ಯರು ಭಾಗವಹಿಸಿದ್ದರು.



