ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಜಾನಪದ ಸಾಹಿತ್ಯವು ಹುಟ್ಟಿನಿಂದ ಸಾಯುವವರೆಗೂ ಪ್ರತಿಯೊಬ್ಬರ ಜೀವನದಲ್ಲೂ ಹಾಸು ಹೊಕ್ಕಾಗಿದೆ. ಜಾನಪದ ಒಳ್ಳೆಯ ಸಂಸ್ಕಾರವನ್ನು ನೀಡುತ್ತಿದೆ ಎಂದು ಸಾಹಿತಿ ಶಿವಯೋಗಿ ವಿಭೂತಿ ಹೇಳಿದರು.
ಅವರು ಕಸಾಪ ವತಿಯಿಂದ ಕಡಕೋಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನಪದ ಸಾಹಿತ್ಯವು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಜಾನಪದ ಸಾಹಿತ್ಯ ಗ್ರಾಮೀಣ ಜನರ ಭಾವನೆಗಳು, ಸಂಪ್ರದಾಯಗಳು, ನಂಬಿಕೆಗಳು ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಶಕ್ತಿಯುತ ಮಾಧ್ಯಮವಾಗಿದೆ ಎಂದರು.
ತಿಪ್ಪಣ್ಣ ಕೊಂಚಿಗೇರಿ, ನವೀನಕುಮಾರ ಅಳವಂಡಿ, ಬಿ.ಎಂ. ಯರಕದ, ಎಸ್.ಬಿ. ಹೊಸೂರ, ಸತೀಶ ದೇಶಪಾಂಡೆ, ಮಲ್ಲಪ್ಪ ಹರ್ತಿ, ಕನಕಮ್ಮ, ಎಸ್.ಬಿ. ಮುಲ್ಕಿಗೌಡರ, ರವಿ ಗೌಡರು, ಈರನಗೌಡ ಪಾಟೀಲ, ಜ್ಯೋತಿ ಕೊಂಚಿಗೇರಿ, ಮಾಂತೇಶ ಮೆಳ್ಳಿಗಟ್ಟಿ, ಶರಣು ಕಲ್ಗುಡಿ ಮುಂತಾದವರು ಉಪಸ್ಥಿತರಿದ್ದರು.



