ವಿಜಯಸಾಕ್ಷಿ ಸುದ್ದಿ, ಗದಗ
ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಸುಮಾರು ಒಂದುವರೆ ಲಕ್ಷ ರೂ. ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿ ಆಭರಣ ಹಾಗೂ ನಗದು ದೋಚಿ ಪರಾರಿಯಾದ ಘಟನೆ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜನತಾ ಪ್ಲಾಟ್ ನಿವಾಸಿ, ನಿವೃತ್ತ ನೌಕರ ಶೇಖರಪ್ಪ ರುದ್ರಪ್ಪ ದೊಡಮನಿ ಎಂಬುವವರು ರಾತ್ರಿ 9.30ರ ಸುಮಾರು ಮನೆಗೆ ಬೀಗ ಹಾಕಿ ಗ್ರಾಮದಲ್ಲಿರುವ ಸಹೋದರನ ಮನೆಗೆ ಹೋಗಿ ಊಟ ಮಾಡಿ ಅಲ್ಲಿಯೇ ಮಲಗಿ ಬೆಳಗ್ಗೆ 6.30ರ ಸುಮಾರಿಗೆ ಬಂದು ನೋಡಿದಾಗ ಮನೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಟ್ರಜರಿಯಲ್ಲಿಟ್ಟಿದ್ದ 3 ತೊಲ ಚಿನ್ನದ ಎರಡು ಚೈನ್, ತಲಾ ಅರ್ಧ ತೊಲ ಎರಡು ಚಿನ್ನದ ಉಂಗುರ, 15 ಗ್ರಾಂ ತೂಕದ ಬೆಳ್ಳಿಯ ಬ್ರಾಸ್ ಲೈಟ್, 12 ಗ್ರಾಂ ಬೆಳ್ಳಿಯ ಉಂಗುರ, 1 ಗ್ರಾಂನ ಎರಡು ಬೆಳ್ಳಿಯ ರಿಂಗ್, 15 ಗ್ರಾಂ ಬೆಳ್ಳಿಯ ಕಾಲಗಡಗ, ನಡಪಟ್ಟಿ, ಗುಣಗಡಗಿ, ಒಂದು ಟೈಟನ್ ವಾಚ್, 5 ಸಾವಿರ ರೂ. ನಗದು ಕಳ್ಳತನವಾಗಿದೆ.
ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.