ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರೆ ಕೇವಲ ಧಾರ್ಮಿಕ ಜಾತ್ರೆಯಾಗಿರದೇ ಹಲವು ಸಾಂಸ್ಕೃತಿಕ, ಸಾಮಾಜಿಕ ಮತ್ತು ಕ್ರೀಡೆಗಳನ್ನು ಆಯೋಜನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ, ಕ್ರೀಡಾಸಕ್ತರಲ್ಲಿ, ಜಾತ್ರೆಗೆ ಬಂದ ಭಕ್ತಾಧಿಗಳಲ್ಲಿ ಮನರಂಜನೆ ಒದಗಿಸುವ ಸೇವಾ ಕಾರ್ಯವನ್ನು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಗವಿಮಠದ ಆವರಣದಲ್ಲಿ ಆಹ್ವಾನಿತ ಪುರುಷ ಹಾಗೂ ಮಹಿಳಾ ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿತ್ತು.
ಕುಸ್ತಿ ಪಂದ್ಯಾವಳಿಗಳನ್ನು ಉದ್ಘಾಟಿಸಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ನಾಗವೇಣಿ ಮಾತನಾಡಿ, ಕುಸ್ತಿ ಕ್ರೀಡೆಯು ಪುರಾತನ ಕ್ರೀಡೆಯಾಗಿದ್ದು, ಇದು ಒಂದು ದೇಹದಾರ್ಢ್ಯ ಚಟುವಟಿಕೆಯಾಗಿದೆ. ಈ ಕ್ರೀಡೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿ ದೈಹಿಕ ಹಾಗೂ ಮಾನಸಿಕ ಸಮತೋಲನ ಬೆಳವಣಿಗೆಗೆ ಸಹಕಾರಿಯಾಗುವುದರ ಮೂಲಕ ಸದೃಢ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು.
ಭಾಗವಹಿಸಿದ ಪುರುಷರ ವಿಭಾಗದಲ್ಲಿ ಆಹ್ವಾನಿತ 16 ತಂಡಗಳಲ್ಲಿ ಪ್ರಥಮ ಪಂದ್ಯದಲ್ಲಿ ಅಭಿ ಹನುಮನಹಳ್ಳಿ ಪ್ರಥಮ, ತಾಯಪ್ಪ ಹೊಸಪೇಟೆ ದ್ವಿತೀಯ, ದ್ವಿತೀಯ ಪಂದ್ಯದಲ್ಲಿ ಪ್ರಜ್ವಲ್ ಹಂಪಿಕಟ್ಟಿ ಪ್ರಥಮ, ಮೌಲಾ ಗಂಗಾವತಿ ದ್ವಿತೀಯ, ತೃತೀಯ ಪಂದ್ಯದಲ್ಲಿ ಪರಶುರಾಮ ಹೊಸಪೇಟೆ ಪ್ರಥಮ, ಮಹೇಂದ್ರ ಅಗ್ರಿಬೊಮ್ಮನಹಳ್ಳಿ ದ್ವಿತೀಯ, ಚತುರ್ಥ ಪಂದ್ಯದಲ್ಲಿ ಹರೀಶ್ ಹೊಸಪೇಟೆ ಪ್ರಥಮ, ಅಲ್ತಾಫ್ ಹಗರಿಬೊಮ್ಮನಹಳ್ಳಿ ದ್ವಿತೀಯ, ಐದನೇ ಪಂದ್ಯದಲ್ಲಿ ರಮೇಶ್ ಹೊಸಪೇಟೆ ಪ್ರಥಮ, ಎಚ್.ಬಿ. ಹಳ್ಳಿ ಇರ್ಫಾನ್ ದ್ವಿತೀಯ, ಆರನೇ ಪಂದ್ಯದಲ್ಲಿ ಇರ್ಫಾನ್ ಹೆಚ್.ಬಿ. ಹಳ್ಳಿ ಪ್ರಥಮ, ಕೀರ್ತಿ ಹೊಸಪೇಟೆ ದ್ವಿತೀಯ, ಏಳನೇ ಪಂದ್ಯದಲ್ಲಿ ಹುಲ್ಕಜ್ಜಿ ಎಚ್.ಬಿ. ಹಳ್ಳಿ ಪ್ರಥಮ, ಅಲ್ತಾಫ್ ಕೊಪ್ಪಳ ದ್ವಿತೀಯ, ಎಂಟನೇ ಪಂದ್ಯದಲ್ಲಿ ಗಂಗಾಧರ್ ಹೆಚ್.ಬಿ. ಹಳ್ಳಿ ಪ್ರಥಮ, ಸುರೇಶ್ ಬೆಳಗಾವಿ ದ್ವಿತೀಯ, ಒಂಬತ್ತನೇ ಪಂದ್ಯದಲ್ಲಿ ಸಚಿನ್ ಮೌಲಿ ಪ್ರಥಮ, ಮಹೇಶ್ ಶರಣಯ್ಯ ಗುಲ್ಬರ್ಗಾ ದ್ವಿತೀಯ, ಹತ್ತನೇ ಪಂದ್ಯದಲ್ಲಿ ಯೋಗೇಶ್ ಪೈ ಪ್ರಥಮ, ಶ್ರೀಕಾಂತ್ ದ್ವಿತೀಯ, ಹನ್ನೋಂದನೇ ಪಂದ್ಯದಲ್ಲಿ ಅಮರೇಶ್ ಗುಲ್ಬರ್ಗ ಪ್ರಥಮ, ಶ್ರೀ ಪವರ್ ದ್ವಿತೀಯ, ಹನ್ನರಡನೇ ಪಂದ್ಯದಲ್ಲಿ ಹನುಮಂತ್ ಅರಸಿಕೆರೆ ಪ್ರಥಮ, ಮಂಜುನಾಥ್ ಹೊಸಪೇಟೆ ದ್ವಿತೀಯ, ಹದಿಮೂರನೇ ಪಂದ್ಯದಲ್ಲಿ ಕೆಂಚಪ್ಪ ಹರಪನಹಳ್ಳಿ ಪ್ರಥಮ, ಬಾಬುರಾವ್ ಕೊಲ್ಲಾಪುರ ದ್ವಿತೀಯ, ಹದಿನಾಲ್ಕನೇ ಪಂದ್ಯದಲ್ಲಿ ಬಸವರಾಜ ಪಾಟೀಲ್ ಪ್ರಥಮ, ಪಪ್ಪು ಕೊಲ್ಲಾಪುರ ದ್ವಿತೀಯ, ಹದಿನೈದನೇ ಪಂದ್ಯದಲ್ಲಿ ಹನುಮಂತ ಮರಿಯಮ್ಮನಹಳ್ಳಿ ಪ್ರಥಮ, ಬಾಲಾಜಿ ಪಾಟೀಲ್ ದ್ವಿತೀಯ, ಹದಿನಾರನೇ ಪಂದ್ಯದಲ್ಲಿ ಕಾರ್ತಿಕ್ ಕಾಟಿ ರಾಣೆಬೆನ್ನೂರು ಪ್ರಥಮ, ಸತೀಶ್ ಮಹಾರಾಷ್ಟ್ರ ದ್ವಿತೀಯ ಸ್ಥಾನ ಪಡೆದರು.
ಪಂದ್ಯಾವಳಿಯಲ್ಲಿ ದೈಹಿಕ ನಿರ್ದೇಶಕರಾದ ಜಯರಾಮ ಮರಡಿತೋಟದ, ಮಂಜುನಾಥ ಆರೆಂಟನೂರ, ಈಶಪ್ಪ ದೊಡ್ಡಮನಿ, ವಿನೋದ ಮುದಿಬಸನಗೌಡ್ರ, ದೈಹಿಕ ಶಿಕ್ಷಕರಾದ ರಾಜು ಮಗಿಮಾವಿನಹಳ್ಳಿ ಹಾಗೂ ರಾಜು ಎಸ್ ಭಾಗವಹಿಸಿದ್ದರು. ಪಂದ್ಯಗಳ ರೆಫರಿಯಾಗಿ ಸಣ್ಣದುರುಗಪ್ಪ ಹಾಗೂ ಈರಣ್ಣ ಈಮ್ಮಡಿಯವರ ಕಾರ್ಯನಿರ್ವಹಿಸಿದರು.
ಮಹಿಳಾ ವಿಭಾಗದಲ್ಲಿ ಆಹ್ವಾನಿತ 8 ತಂಡಗಳಲ್ಲಿ ಪ್ರಥಮ ಪಂದ್ಯದಲ್ಲಿ ಗದಗನ ಐಶ್ವರ್ಯ ಪ್ರಥಮ, ದ್ವಿತೀಯ ಪಂದ್ಯದಲ್ಲಿ ಕುಕನೂರಿನ ಅರಿಫಾ ಪ್ರಥಮ, ತೃತೀಯ ಪಂದ್ಯದಲ್ಲಿ ಹೋಸಪೇಟೆಯ ಸಿಂಧೂ ಪ್ರಥಮ, ಚತುರ್ಥ ಪಂದ್ಯದಲ್ಲಿ ಹೊಸಪೇಟೆಯ ಕವಿತಾ ಪ್ರಥಮ, ಐದನೇ ಪಂದ್ಯದಲ್ಲಿ ಜಲಜಾಕ್ಷಿ ಪ್ರಥಮ, ಆರನೇ ಪಂದ್ಯದಲ್ಲಿ ಶಿವಮೊಗ್ಗದ ಸಾತಿಯಾ ಪ್ರಥಮ, ಏಳನೇ ಪಂದ್ಯದಲ್ಲಿ ಗದಗನ ವೈಷ್ಣವಿ ಪ್ರಥಮ, ಎಂಟನೇ ಪಂದ್ಯದಲ್ಲಿ ಕಂಪ್ಲಿಯ ಬಿಂದಿಯಾ ಪ್ರಥಮ ಪಡೆದರು.



