ವಿಜಯಸಾಕ್ಷಿ ಸುದ್ದಿ, ಗದಗ: ಬೆಂಗಳೂರು-ವಿಜಯಪುರ ವಿಶೇಷ ರೈಲುಗಳು ಗದಗ ಮೂಲಕವೇ ಸಂಚರಿಸಲು ವಿಶ್ವನಾಥ ಖಾನಾಪೂರ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.
ಯಶವಂತಪುರ-ವಿಜಯಪುರ ಹಬ್ಬದ ವಿಶೇಷ ರೈಲು ಸಂಕ್ರಾAತಿ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜನವರಿ 13ರಂದು ರೈಲು ಸಂಖ್ಯೆ: 06245 ಮತ್ತು ಜ. 23ರಂದು ರಾತ್ರಿ 7.15ಕ್ಕೆ ಎಸ್.ಎಂ.ವಿ.ಟಿ ರೈಲು ನಿಲ್ದಾಣದಿಂದ ಹೊರಡುವ ರೈಲು ಮರುದಿನ ಬೆಳಿಗ್ಗೆ 7ಕ್ಕೆ ವಿಜಯಪುರ ತಲುಪಲಿದೆ.
ಇಂತಹ ವಿಶೇಷ ಹಬ್ಬದ ಸಂದರ್ಭದಲ್ಲಿ ನಮ್ಮ ಗದಗ ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯಾವುದೇ ವಿಶೇಷ ರೈಲುಗಳು ಇಲ್ಲ. ಹೀಗಾಗಿ ಬೆಂಗಳೂರು-ವಿಜಯಪುರ ವಿಶೇಷ ರೈಲುಗಳಿಗೆ ಗದುಗಿನಲ್ಲಿಯೂ ನಿಲುಗಡೆ ನೀಡುವಂತೆ ಅವರು ವಿನಂತಿಸಿದ್ದಾರೆ.



