ವಿಜಯಸಾಕ್ಷಿ ಸುದ್ದಿ, ಗದಗ: 2024-25ನೇ ಸಾಲಿನಲ್ಲಿ ಗದಗ-ಬೆಟಗೇರಿ ರೋಟರಿ ಸಂಸ್ಥೆಯು ಕೈಗೊಂಡ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಗುರುತಿಸಿ ರೋಟರಿ ಜಿಲ್ಲೆ 3170 ಅನೇಕ ಪ್ರಶಸ್ತಿ ಹಾಗೂ ಮನ್ನಣೆ ನೀಡಿದೆ.
ಕೊಲ್ಹಾಪೂರದಲ್ಲಿ ನಡೆದ 67ನೇ ಜಿಲ್ಲಾ ಸಮ್ಮೇಳನದಲ್ಲಿ ಜಿಲ್ಲಾ ಮಾಜಿ ಗವರ್ನರ್ ರೊ. ಶರದ ಪೈಯವರು ಸಂಸ್ಥೆಗೆ ಉತ್ತಮ ಸದಸ್ಯರ ಸಂಯೋಜಕ ಸಂಸ್ಥೆ ಹಾಗೂ ಉತ್ತಮ ಸಾಮಾಜಿಕ ಸೇವೆ ಸಂಸ್ಥೆಯೆಂದು ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಅಸಿಸ್ಟಂಟ್ ಗವರ್ನರ್ ರೊ. ಶಿವಾಚಾರ್ಯ ಎಸ್.ಹೊಸಳ್ಳಿಮಠರಿಗೆ ರೋಟರಿ ಕ್ಲಬ್ ಗದಗ -ಬೆಟಗೇರಿ, ರೋಟರಿ ಕ್ಲಬ್ ಗಜೇಂದ್ರಗಡ ಹಾಗೂ ಗದಗ ರೋಟರಿ ಸೆಂಟ್ರಲ್ ಸಂಸ್ಥೆಗಳಿಗೆ ಉತ್ತಮ ಮಾರ್ಗದರ್ಶನ ಹಾಗೂ ಸಲಹೆ ನೀಡಿದನ್ನು ಪರಿಗಣಿಸಿ ಉತ್ತಮ ಅಸಿಸ್ಟಂಟ್ ಗವರ್ನರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಮಾಜಿ ಅಧ್ಯಕ್ಷರಾದ ರೊ. ಡಾ. ಆರ್.ಬಿ. ಉಪ್ಪಿನ, ಕಾರ್ಯದರ್ಶಿಗಳಾದ ರೊ. ಸಂತೋಷ ಅಕ್ಕಿ, ರೊ. ಶಿವಾಚಾರ್ಯ ಹೊಸಳ್ಳಿಮಠ, ಅಧ್ಯಕ್ಷರಾದ ರೊ. ಡಾ. ಆರ್.ಕೆ. ಗಚ್ಛಿನಮಠ, ರೊ. ಬಾಲಕೃಷ್ಣ ಕಾಮತ್, ರೊ. ಶ್ರೀಧರ ಸುಲ್ತಾನಪೂರ ಸಮ್ಮೇಳನದಲ್ಲಿ ಭಾಗವಹಿಸಿದ್ದರು. 2024-25 ನೇ ಸಾಲಿನ ಅಧ್ಯಕ್ಷರಾದ ರೊ. ಡಾ. ಆರ್.ಬಿ. ಉಪ್ಪಿನ ಎಲ್ಲ ಸದಸ್ಯರನ್ನು ಅಭಿನಂದಿಸಿದರು.



