ಚೆನ್ನೈ: ತಮಿಳುನಾಡು ಚುನಾವಣಾ ಫಲಿತಾಂಶದ ದಿನ ರಾಜಕೀಯ ಜೊತೆಗೆ ಸಿನಿ ವಲಯದಲ್ಲೂ ಚರ್ಚೆ ತೀವ್ರಗೊಂಡಿದೆ. ಟಿವಿಕೆ ಪಕ್ಷದ ಮೂಲಕ ಸ್ಪರ್ಧಿಸಿರುವ ನಟ ವಿಜಯ್ಗೆ ಇಂದು ನಿರ್ಣಾಯಕ ಕ್ಷಣವಾಗಿದೆ.
ಇದೀಗ ನಟಿ ತ್ರಿಷಾ ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿರುವುದು ಹೊಸ ಕುತೂಹಲಕ್ಕೆ ಕಾರಣವಾಗಿದೆ. ಮತ ಎಣಿಕೆ ಆರಂಭಕ್ಕೂ ಮುನ್ನ ಈ ಪೂಜೆ ನಡೆದಿರುವುದರಿಂದ, ಇದು ವಿಜಯ್ ಗೆ ಶುಭಕೋರಿಕೆಯೇ ಎಂಬ ಚರ್ಚೆ ಜೋರಾಗಿದೆ.
ವಿಜಯ್ ರಾಜಕೀಯ ಪ್ರವೇಶದಿಂದಲೇ ಈ ಚುನಾವಣೆ ರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದ್ದು, ತ್ರಿಷಾ ಅವರ ಈ ನಡೆ ಇನ್ನಷ್ಟು ಹೈಪ್ ಸೃಷ್ಟಿಸಿದೆ.



