HomeCovid Updatesಬುಧವಾರ ಒಂದೇ ದಿನ 43 ಜನರಿಗೆ ಸೋಂಕು; ಶತಕ ದಾಟಿದ ಸೋಂಕಿತರು, ಸಂಪೂರ್ಣ ಅಪ್ಡೇಟ್

ಬುಧವಾರ ಒಂದೇ ದಿನ 43 ಜನರಿಗೆ ಸೋಂಕು; ಶತಕ ದಾಟಿದ ಸೋಂಕಿತರು, ಸಂಪೂರ್ಣ ಅಪ್ಡೇಟ್

Spread the love

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯಾದ್ಯಂತ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ಹೆಚ್ಚಳವಾಗುತ್ತಿದ್ದು, ಪಾಸಿಟಿವಿಟಿ ದರ 1.22%ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸೋಮವಾರ 16, ಮಂಗಳವಾರ 21, ಇವತ್ತು ಬುಧವಾರ 43 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದಂತಾಗಿದೆ. ಮಂಗಳವಾರದವರೆಗೆ 84 ರಷ್ಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ, 121ಕ್ಕೆ ಏರಿಕೆಯಾಗಿದೆ.

ಗದಗ ನಗರದ 27ನೇ ವಾರ್ಡಿನ ಎಸ್.ಬಿ.ಸಂಕನಗೌಡ ಬಡಾವಣೆ, ಮುಳಗುಂದ ರೋಡ, 13ನೇ ವಾರ್ಡಿನ ಹಳೆಯ ಸಾಯಿಬಾಬಾ ದೇವಸ್ಥಾನ, 5ನೇ ವಾರ್ಡಿನ ಬುದ್ಧಿಮಾಂದ್ಯ ಮಕ್ಕಳ ಶಾಲೆ ಹತ್ತಿರ, 6ನೇ ವಾರ್ಡಿನ ಕನ್ಯಾಳ ಅಗಸಿ, 11ನೇ ವಾರ್ಡಿನ ಗಾಂಧಿ ವೃತ್ತದ ಹತ್ತಿರ, 23ನೇ ವಾರ್ಡಿನ ಒಕ್ಕಲಗೇರಿ, ಕುರಹಟ್ಟಿಪೇಟೆ, 29ನೇ ವಾರ್ಡಿನ ರಾಜೀವ್‌ಗಾಂಧಿ ನಗರ, ಜಿಮ್ಸ್ ಗದಗ, ಎಸ್‌ಬಿ ನಗರ, 1ನೇ ವಾರ್ಡಿನ ಎಸ್.ಎಂ.ಕೃಷ್ಣ ನಗರ, ಇಮಾಮ್ ಹುಸೇನ್ ಕಾಲನಿ, 32ನೇ ವಾರ್ಡಿನ ಕಿಲ್ಲಾ ಚಂದ್ರಸಾಲಿ ಓಣಿ, 35ನೇ ವಾರ್ಡಿನ ಕಳಸಾಪುರ ರಸ್ತೆಯ ನಿವಾಸಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಅದರಂತೆ, ಗದಗ ತಾಲ್ಲೂಕಿನ ನಾಗಾವಿ, ನಾಗಸಮುದ್ರ, ಮಲ್ಲಸಮುದ್ರ, ಕೋಟುಮಚಗಿ, ಹರ್ತಿ, ಹುಲಕೋಟಿ ಗ್ರಾಮದ ಸಾಯಿನಗರ, ನಾಗಾವಿ ತಾಂಡಾ, ಮುಂಡರಗಿ ತಾಲ್ಲೂಕಾಸ್ಪತ್ರೆ, ಮಸೂತಿ ಓಣಿ, ಹುಡ್ಕೋ ಕಾಲನಿ, ಕೋಟೆಭಾಗ, ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಕೆಜಿಬಿವ್ಹಿ ಹಾಸ್ಟೆಲ್, ನರಗುಂದ ತಾಲ್ಲೂಕಿನ ಬೈರನಹಟ್ಟಿ, ಗಜೇಂದ್ರಗಡ, ರೋಣ ತಾಲ್ಲೂಕಿನ ಹೊಳೆಆಲೂರ, ಶಿರಹಟ್ಟಿಯ ಕೋಟೆ ಓಣಿ, ಪೊಲೀಸ್ ಠಾಣೆ ಹತ್ತಿರ, ಶಿರಹಟ್ಟಿ ತಾಲ್ಲೂಕಿನ ಮಾಚೇನಹಳ್ಳಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದ ನಿವಾಸಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.

ಬುಧವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 6,98,549 ಮಾದರಿ ಸಂಗ್ರಹಿಸಿದ್ದು, 6,72,345 ನಕಾರಾತ್ಮಕವಾಗಿವೆ. ಬುಧವಾರದ 43 ಪ್ರಕರಣ ಸೇರಿ ಒಟ್ಟು 26,207 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ 6 ಸೇರಿ ಒಟ್ಟು 25,767 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 121 ಸಕ್ರಿಯ ಪ್ರಕರಣಗಳಿದ್ದು, ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ಒಟ್ಟು 121 ಸಕ್ರಿಯ ಪ್ರಕರಣಗಳ ಪೈಕಿ ಗದಗ ತಾಲ್ಲೂಕಿನಲ್ಲಿ 81, ಮುಂಡರಗಿ 23, ನರಗುಂದ 02, ರೋಣ 08 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 07 ಪ್ರಕರಣಗಳಿವೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!