ವಿಜಯಸಾಕ್ಷಿ ಸುದ್ದಿ, ಗದಗ: ಮಣಕವಾಡದ ಮಹಿಮಾ ಪುರುಷ ಶ್ರೀ ಗುರು ಮೃತ್ಯುಂಜಯ ಮಹಾಸ್ವಾಮಿಗಳ ಸ್ಮರಣೋತ್ಸವ ಮಾಲಿಕೆ–೩೬೭ರ ಅಂಗವಾಗಿ ಕವಿಗೋಷ್ಠಿ, ಸಂಗೀತ ಹಾಗೂ ಆಧ್ಯಾತ್ಮ ಚಿಂತನ ಕಾರ್ಯಕ್ರಮವನ್ನು ಆ. ೨೩ರಂದು ಭಾನುವಾರ ಬೆಳಗ್ಗೆ ೧೦.೩೦ಕ್ಕೆ ನಗರದ ಮುನ್ಸಿಪಲ್ ಹೈಸ್ಕೂಲ್ ಪಕ್ಕದಲ್ಲಿರುವ ಶ್ರೀ ಗುರು ಮೃತ್ಯುಂಜಯ ಗುರುಕುಲ ಆಶ್ರಮದ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಉಪನ್ಯಾಸಕ ವಿಜಯ ಮಹಾಂತ ದೇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನಾಗಾವಿಯ ಮೃತ್ಯುಂಜಯ ಹಟ್ಟಿ, ಸಂಭಾಪುರದ ರಾಯಪ್ಪ ನಾಗನೂರ, ಚಿಕ್ಕೋಪ್ಪದ ಶಿವಣ್ಣ ಒಡೆಯರ, ಹಿರೇಹಂದಿಗೋಳದ ಶಿವಶಂಕ್ರಪ್ಪ ಆರಟ್ಟಿ, ರಾಜಣಸಾ ಕಲಬುರ್ಗಿ ಹಾಗೂ ಎಚ್.ಎನ್. ಕುರಿ ಉಪಸ್ಥಿತರಿರುವರು.
ಬಸು ಹಿರೇಮಠ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಆಯ್ದ ೨೦ ಕಾಲೇಜು ವಿದ್ಯಾರ್ಥಿಗಳಿಂದ ಕವಿಗೋಷ್ಠಿ ನಡೆಯಲಿದೆ.
ಆಶ್ರಮದ ವಿದ್ಯಾರ್ಥಿಗಳಾದ ಆಲಮ್, ಅಸ್ಲಮ್ ಹಾಗೂ ಅಕ್ರಮ್ ಅವರು ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.



