HomeIndia Newsಭಾರತ–ದಕ್ಷಿಣ ಆಫ್ರಿಕಾ ಸೃಜನಶೀಲತೆಗೆ ಹೊಸ ಜೋಡಿ

ಭಾರತ–ದಕ್ಷಿಣ ಆಫ್ರಿಕಾ ಸೃಜನಶೀಲತೆಗೆ ಹೊಸ ಜೋಡಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನವದೆಹಲಿ: ಭಾರತ–ದಕ್ಷಿಣ ಆಫ್ರಿಕಾ ನಡುವಿನ ಸೃಜನಶೀಲ ಆರ್ಥಿಕ ಸಹಭಾಗಿತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (KSMCA) ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಧಾನಮಂತ್ರಿ ಸಂಗ್ರಹಾಲಯ, ತೀನ್ ಮೂರ್ತಿ ಭವನದಲ್ಲಿ ನಡೆದ ಸಭೆಯಲ್ಲಿ BRICS Women’s Business Alliance–South Africa Chapter (BRICS WBA-SA) ಹಾಗೂ BRICS Chamber of Commerce and Industry (BRICS CCI) ಜತೆ ತ್ರಿಪಕ್ಷೀಯ Memorandum of Coordination (MoC)ಗೆ ಸಹಿ ಮಾಡಲಾಯಿತು.

KSMCAಯ ಅಧ್ಯಕ್ಷ ಹಾಗೂ ಕಾರವಾರ ಶಾಸಕ ಸತೀಶ್ ಕೃಷ್ಣ ಸೈಲ್ ಅವರ ಮಾರ್ಗದರ್ಶನದಲ್ಲಿ ನಡೆದ ಒಡಂಬಡಿಕೆಗೆ KSMCA ವ್ಯವಸ್ಥಾಪಕ ನಿರ್ದೇಶಕ ಬಿ. ಆನಂದ್, BRICS CCI ಅಧ್ಯಕ್ಷ ಸಮೀಪ್ ಶಾಸ್ತ್ರಿ ಹಾಗೂ BRICS Women’s Business Alliance–South Africa ಕಾರ್ಯಕಾರಿ ಅಧ್ಯಕ್ಷೆ HRH ಪ್ರಿನ್ಸೆಸ್ ಲೆಬೊಗಾಂಗ್ ಜುಲು ಸಹಿ ಹಾಕಿದರು.

ಈ ಸಹಕಾರದ ಪ್ರಮುಖ ಉದ್ದೇಶ ಭಾರತ–ದಕ್ಷಿಣ ಆಫ್ರಿಕಾ BRICS Creative Economy Partnership ಅನ್ನು ಬಲಪಡಿಸುವುದಾಗಿದ್ದು, ‘Screen to Market™’ ಅನ್ನು ಪ್ರಮುಖ ಅನುಷ್ಠಾನ ಕಾರ್ಯಕ್ರಮವಾಗಿ ಗುರುತಿಸಲಾಗಿದೆ. ಸೃಜನಶೀಲ ಆರ್ಥಿಕತೆ, ಮಾಧ್ಯಮ, ಮನರಂಜನೆ, ಡಿಜಿಟಲ್ ಕಂಟೆಂಟ್, ಉದ್ಯಮಶೀಲತೆ, ನವೋದ್ಯಮ, ವ್ಯಾಪಾರ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ಸಹಕಾರ ವೃದ್ಧಿಸಲು ಒಡಂಬಡಿಕೆ ನೆರವಾಗಲಿದೆ.

ಸೃಜನಶೀಲ ವೃತ್ತಿಪರರು, ಉದ್ಯಮಿಗಳು ಹಾಗೂ ಸಂಸ್ಥೆಗಳಿಗೆ ಎರಡೂ ದೇಶಗಳ ಮಾರುಕಟ್ಟೆಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಗಡಿ ದಾಟಿದ ಸಹಭಾಗಿತ್ವ, ಪ್ರತಿಭೆ ಹಾಗೂ ಜ್ಞಾನ ವಿನಿಮಯ, ಉದ್ಯಮ ಸಂಪರ್ಕ, ಮಾರುಕಟ್ಟೆ ಅಭಿವೃದ್ಧಿ ಮತ್ತು ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲಾಗುವುದು.

‘Screen to Market™’ ಮೂಲಕ ಆಲೋಚನೆ, ಪ್ರತಿಭೆ ಮತ್ತು ಸೃಜನಶೀಲ ಉದ್ಯಮಗಳನ್ನು ಹೊಸ ಮಾರುಕಟ್ಟೆಗಳು ಹಾಗೂ ಜಾಗತಿಕ ಅವಕಾಶಗಳೊಂದಿಗೆ ಸಂಪರ್ಕಿಸುವ ವೇದಿಕೆ ರೂಪಿಸುವ ಉದ್ದೇಶ ಹೊಂದಲಾಗಿದೆ. ಸೃಜನಶೀಲ ಕ್ಷೇತ್ರವನ್ನು ಕೇವಲ ವಿಷಯ ನಿರ್ಮಾಣಕ್ಕೆ ಸೀಮಿತಗೊಳಿಸದೆ, ವಾಣಿಜ್ಯೀಕರಣ, ಉದ್ಯಮ ಅಭಿವೃದ್ಧಿ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶದತ್ತ ಕೊಂಡೊಯ್ಯುವುದು ಇದರ ಆಶಯವಾಗಿದೆ.

ಕರ್ನಾಟಕ ಸರ್ಕಾರದ ಉದ್ಯಮವಾಗಿರುವ KSMCA ತನ್ನ ಮಾರ್ಕೆಟಿಂಗ್ ಕಮ್ಯುನಿಕೇಷನ್, ಜಾಹೀರಾತು ಹಾಗೂ ತಂತ್ರಾತ್ಮಕ ಸಂಪರ್ಕ ಕ್ಷೇತ್ರದ ಪರಿಣತಿಯನ್ನು ಬಳಸಿಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ವೇದಿಕೆಗಳು ಮತ್ತು ಸಹಭಾಗಿತ್ವಗಳನ್ನು ರೂಪಿಸಲು ಮುಂದಾಗಿದೆ. ಈ ತ್ರಿಪಕ್ಷೀಯ ಒಡಂಬಡಿಕೆಯು BRICS ವೇದಿಕೆಯ ಮೂಲಕ ಭಾರತ–ದಕ್ಷಿಣ ಆಫ್ರಿಕಾ ನಡುವಿನ ವ್ಯಾಪಾರಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳಿಗೆ ಮತ್ತಷ್ಟು ಬಲ ನೀಡುವ ನಿರೀಕ್ಷೆ ಮೂಡಿಸಿದೆ.

ಸೃಜನಶೀಲತೆಗೆ ಜಾಗತಿಕ ಮಾರುಕಟ್ಟೆ

• ಸೃಜನಶೀಲ ಪ್ರತಿಭೆ ಹಾಗೂ ಆಲೋಚನೆಗಳಿಗೆ ಜಾಗತಿಕ ವೇದಿಕೆ

• ಭಾರತ–ದಕ್ಷಿಣ ಆಫ್ರಿಕಾ ನಡುವೆ ಪ್ರತಿಭೆ ಮತ್ತು ಜ್ಞಾನ ವಿನಿಮಯ

• ಸೃಜನಶೀಲ ಉದ್ಯಮಗಳಿಗೆ ಹೊಸ ಮಾರುಕಟ್ಟೆ ಅವಕಾಶ

• ಉದ್ಯಮ ಸಂಪರ್ಕ ಹಾಗೂ ಹೂಡಿಕೆ ಅವಕಾಶಗಳ ಅನ್ವೇಷಣೆ

• ಮಾಧ್ಯಮ, ಮನರಂಜನೆ ಮತ್ತು ಡಿಜಿಟಲ್ ಕಂಟೆಂಟ್‌ಗೆ ಉತ್ತೇಜನ

• ಸೃಜನಶೀಲ ಕ್ಷೇತ್ರದ ವಾಣಿಜ್ಯೀಕರಣ ಹಾಗೂ ಉದ್ಯಮ ಅಭಿವೃದ್ಧಿಗೆ ಒತ್ತು

• ಸ್ಥಳೀಯ ಪ್ರತಿಭೆ ಮತ್ತು ಉದ್ಯಮಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸಂಪರ್ಕಿಸುವ ಪ್ರಯತ್ನ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img