ವಿಜಯಸಾಕ್ಷಿ ಸುದ್ದಿ, ಗದಗ
ಮನೆಯ ಬೀಗ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಒಳಗಿದ್ದ ಲಕ್ಷಾಂತರ ರೂ. ಮೌಲ್ಯದ ಆಭರಣಗಳನ್ನು ದೋಚಿರುವ ಬಗ್ಗೆ ಗದಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 22ರಿಂದ ಜು.31ರೊಳಗಿನ ನಡುವಿನ ಅವಧಿಯಲ್ಲಿ ಹುಬ್ಬಳ್ಳಿ ರಸ್ತೆಯ ಕೇಶವ ನಗರದ ನಾಲ್ಕನೇ ಕ್ರಾಸ್ ನಲ್ಲಿ ಇರುವ ಇಂಜಿನಿಯರ್ ಸಮೀವುಲ್ಲಾ ಮಹಮ್ಮದಾಸ್ ಅಂಖನ್ ಲೋಹಾನಿ ಅವರ ವಾಸದ ಮನೆಯ ಗ್ರಿಲ್ಗೇಟಿಗೆ ಅಳವಡಿಸಿದ್ದ ಕೀಲಿಯನ್ನು ಹಾಗೂ ಬಾಗಿಲಿಗೆ ಹಾಕಿದ್ದ ಇಂಟರ್ಲಾಕನ್ನು ಮುರಿದ ಕಳ್ಳರು ಮನೆಯೊಳಗೆ ಹೋಗಿ ಬೆಡ್ರೂಮಿನ ಟ್ರೆಝರಿಯ ಬಾಗಿಲನ್ನು ಮೀಟಿ ತೆಗೆದು,
ಟ್ರೆಝರಿಯೊಳಗಿದ್ದ 6 ಲಕ್ಷ ರೂ. ಬೆಲೆಬಾಳುವ 200 ಗ್ರಾಂ. ತೂಕದ ನಾಲ್ಕು ಬಂಗಾರದ ನೆಕ್ಲೆಸ್, 2.7 ಲಕ್ಷ ರೂ. ಬೆಲೆಬಾಳುವ ಸುಮಾರು 90 ಗ್ರಾಂ. ತೂಕದ ನಾಲ್ಕು ಬಂಗಾರದ ಬಳೆಗಳು, 12 ಸಾವಿರ ರೂ. ಬೆಲೆಬಾಳುವ 4 ಗ್ರಾಂ. ತೂಕದ ಬಂಗಾರದ ಉಂಗುರ, 60 ಸಾವಿರ ರೂ. ಬೆಲೆಯ 20 ಗ್ರಾಂ. ತೂಕದ ಬಂಗಾರದ ಕಿವಿಯೋಲೆ ಸೇರಿದಂತೆ ಒಟ್ಟೂ 9,42,000 ರೂ. ಬೆಲೆಬಾಳುವ 314 ಗ್ರಾಂ. ತೂಕವಿರುವ ಬಂಗಾರದ ಆಭರಣಗಳು ಕಳ್ಳತನವಾಗಿದೆ.
ಈ ಕುರಿತು ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.