ವಿಜಯಸಾಕ್ಷಿ ಸುದ್ದಿ, ಗದಗ
ಮಂಗಳವಾರ ಸಂಜೆ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಮೊಹರಂ ಮೆರವಣಿಗೆ ಸಂದರ್ಭದಲ್ಲಿ ನಡೆದ ಚಾಕು ಇರಿತದ ನಂತರ ನಡೆದ ಘಟನೆಗೆ ಸಂಬಂಧಿಸಿದಂತೆ 15 ಜನರ ವಿರುದ್ಧ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ಚಾಕು ಇರಿತದ ಪ್ರಕರಣ; ಶ್ರೀರಾಮ ಸೇನಾ ಕಾರ್ಯಕರ್ತ ಸೇರಿ ಆರು ಜನರ ವಿರುದ್ಧ ಕೇಸ್, ಮೂವರ ಬಂಧನ
ಚಾಕು ಇರಿತದ ನಂತರ ಗಾಯಾಳುಗಳ ಪರವಾಗಿ
ಗುಂಪು ಕಟ್ಟಿಕೊಂಡು ಸೋಮು ಗುಡಿ ಹಾಗೂ ಇನ್ನಿಬ್ಬರನ್ನು ನಮ್ಮ ತಾಬಾಕ್ಕೆ ಕೊಡಿ ಅವರನ್ನು ನಾವು ನೋಡಿಕೋತೀವಿ ಅಂತ ಕೈಯಲ್ಲಿ ಕಲ್ಲು ಹಿಡಿದುಕೊಂಡು ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯುಂಟು ಮಾಡುವ ಉದ್ದೇಶದಿಂದ, ಪೊಲೀಸರು ಹೇಳಿದರೂ ಕೇಳದೇ ಮುನ್ನುಗ್ಗಲು ಪ್ರಯತ್ನ ನಡೆಸಿದ್ದ ಸುಮಾರು 15 ಜನರ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ರಿಯಾಜ್ ಬುವಾಜಿ, ಅನ್ವರ್ ಬುವಾಜಿ, ಅರಿಫ್ ಬುವಾಜಿ, ಮಹಿಬೂಬಸಾಬ್ ಹರ್ಲಾಪೂರ, ಸುಬಾನ್ ಹುಸೇನ್ಸಾಬ್ ಹೊಸಮನಿ, ಸುಲೇಮಾನ್ ಹೊಸಮನಿ, ಮಾಬುಸಾಬ್ ಬುವಾಜಿ, ರಾಜೇಸಾಬ್ ಹರ್ಲಾಪೂರ, ಶರೀಫ್ ಬುವಾಜಿ, ಮೀರಸಾಬ್ ಬುವಾಜಿ, ಅಶಿಫ್ ಬುವಾಜಿ, ಹುಸೇನ್ಸಾಬ್ ಹೊಸಮನಿ, ಮೌಲಾಸಾಬ್ ಹೊಸಮನಿ, ಮುಷ್ತಾಕ್ ಡೋಲಿ ಹಾಗೂ ಚಾಂದಸಾಬ್ ಹೊಸಮನಿ ಎಂಬುವವರ ಮೇಲೆ ಪೊಲೀಸರು, ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಹಲವು ಕಲಂ ಅಡಿಯಲ್ಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.