ವಿದ್ಯುತ್ ಅವಘಡ; ಜಾನುವಾರಗಳ ಸಜೀವ ದಹನ

0
Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ

Advertisement

ವಿದ್ಯುತ್ ಅವಘಡದಿಂದ ಎರಡು ಹಸು ಹಾಗೂ ನಾಲ್ಕು ಕರುಗಳು ಸಜೀವ ದಹನವಾದ ಘಟನೆ ಪಟ್ಟಣದ ಅಯ್ಯನಕೆರೆ ಬಳಿ ಶುಕ್ರವಾರ ಜರುಗಿದೆ.

ಗೌಳಿ ನಾಗಪ್ಪ ಅವರಿಗೆ ಸೇರಿದ್ದ ದನದ ಕೊಟ್ಟಿಗೆಯಲ್ಲಿಯ ಜಾನುವಾರುಗಳಿಗೆ ಎಂದಿನಂತೆ ಅವರ ಮಗ ಗೌಳಿ ನಿಂಗಪ್ಪ ಗುರುವಾರ ರಾತ್ರಿ ಮೇವು, ನೀರು ಹಾಕಿ ಮನೆಗೆ ಹೋಗಿದ್ದಾರೆ. ಬೆಳಿಗ್ಗೆ ಬಂದು ನೋಡಿದಾಗ ಎರಡು ಹಸುಗಳು ಹಾಗೂ ನಾಲ್ಕು ಕರುಗಳು ಮೃತಪಟ್ಟಿವೆ.

ಐದಾರು ಲಕ್ಷದ ರಾಸುಗಳು ವಿದ್ಯುತ್‌ನಿಂದ ಉಂಟಾದ ಅವಘಡಕ್ಕೆ ಬಲಿಯಾಗಿವೆ. ತಹಸೀಲ್ದಾರ ಡಾ.ಶಿವಕುಮಾರ ಬಿರಾದಾರ, ಪಶುವೈದ್ಯಾಧಿಕಾರಿ ಡಾ.ಶಿವಕುಮಾರ, ಬೆಸ್ಕಾಂ ಅಭಿಯಂತರರು ಹಾಗೂ ಪಿಎಸ್‌ಐ ಶಾಂತಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here