ಮಂಡ್ಯದ ವಿಶ್ವೇಶ್ವರಯ್ಯ ನಾಲಾ ಸುರಂಗ ಭೂ ಕುಸಿತ

0
Spread the love

ಮಂಡ್ಯ;- ವಿಶ್ವೇಶ್ವರಯ್ಯ ನಾಲಾ ಸುರಂಗ ಭೂ ಕುಸಿತ ಉಂಟಾಗಿದೆ. ನಗರದಲ್ಲಿ ರಾತ್ರಿ ಸುರಿದ ಧಾರಕಾರ ಮಳೆಗೆ ಅವಘಡ ಸಂಭವಿಸಿದೆ. ಮಂಡ್ಯ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಘಟನೆ ಜರುಗಿದೆ.

Advertisement

ಘಟನೆಯಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮದ ಮಧ್ಯ ಭಾಗದಲ್ಲಿ ಸುರಂಗ ಹಾದು ಹೋಗಿದ್ದು, ಏಕಾಏಕಿ ನೂರು ಅಡಿ ಸುರಂಗ ಕುಸಿದಿದೆ. ರಾಜಣ್ಣ ಎಂಬುವವರ ಮನೆಯ ಹಿಂದೆ ಸುರಂಗ ಕುಸಿದಿದೆ. ಏಕಾಏಕಿ ಸುರಂಗ ಕುಸಿದ ಹಿನ್ನೆಲೆ ಮನೆ ಗೋಡೆ ಕುಸಿತವಾಗಿದೆ.

ಮಂಡ್ಯದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆ ಸುರಿದ ಹಿನ್ನೆಲೆ ಅವಘಡ ಸಂಭವಿಸಿದೆ. ಹುಲಿಕೆರೆ ಬಳಿಯಿಂದ ವಿ.ಸಿ ನಾಲೆಗೆ ನಿರ್ಮಿಸಿರುವ ಸುರಂಗ ಮಾರ್ಗ ಇದಾಗಿದ್ದು, ಏಷ್ಯಾದ ಮೊದಲ ಸುರಂಗ ಮಾರ್ಗವೆಂದೆ ಹುಲಿಕೆರೆ ಬುಗ ಸುರಂಗ ಮಾರ್ಗ ಪ್ರಸಿದ್ದಿಯಾಗಿತ್ತು.

ಮದ್ದೂರು ಮಳವಳ್ಳಿ ತಾಲೂಕಿಗೆ ಈ ಸುರಂಗ ಮಾರ್ಗದ‌ ಮೂಲಕ ಹಾದು ಹೋಗಿರುವ ವಿಸಿ ನಾಲೆ ಎನ್ನಲಾಗಿದ್ದು, ವಿಸಿ ನಾಲೆಯ ಸುರಂಗ ಮಾರ್ಗದ ಭೂ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here