ಸಾಮರಸ್ಯದ ಗುರುಬಸವ ಸ್ವಾಮೀಜಿ ಲಿಂಗ್ಯೆಕ್ಯ

0
Spread the love

Advertisement

ನರಗುಂದ; ತಾಲೂಕಿನ ಶಿರೋಳ ಗ್ರಾಮದ ಶ್ರೀ ತೋಂಟದಾರ್ಯ ಮಠದ ಗುರುಬಸವ ಸ್ವಾಮೀಜಿ ರವಿವಾರ ಲಿಂಗ್ಯೆಕ್ಯರಾಗಿದ್ದಾರೆ.

ಬಹುದಿನಗಳಿಂದ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ರವಿವಾರ ಬೆಳಗಿನ ಜಾವ ಲಿಂಗ್ಯೆಕ್ಯರಾಗಿದ್ದಾರೆ.

ಇನ್ನೂ ಶ್ರೀಗಳ ಅಗಲಿಕೆಯಿಂದ ಶಿರೋಳ ಗ್ರಾಮದಲ್ಲಿ ಮೌನ‌ ಆವರಿಸಿದ್ದು, ಶ್ರೀಗಳ ಪಾರ್ಥಿವ ಶರೀರ ಸಂಜೆ ಶಿರೋಳ ಗ್ರಾಮಕ್ಕೆ ಬರಲಿದ್ದು, ಶ್ರೀಮಠದಲ್ಲಿ ಭಕ್ತರು ಕಣ್ಣೀರಿಡುತ್ತಿದ್ದಾರೆ.

ಗಡಿ ಭಾಗದಲ್ಲಿ ಗುಡಿಕಟ್ಟಿ ತಾಯಿ ಕನ್ನಡಮ್ಮನ ಸೇವೆ ಮಾಡಿ ಕನ್ನಡದ ಸ್ವಾಮೀಜಿ ಎಂದೇ ಖ್ಯಾತಿ ಪಡೆದಿದ್ದ ಗುರುಬಸವ ಶ್ರೀಗಳು, ಜಗದ್ಗುರು ಡಾ.ತೋಂಟದಾರ್ಯ ಸಿದ್ದಲಿಂಗ ಶ್ರೀಗಳ ಆಪ್ತ ಶಿಷ್ಯರಾಗಿದ್ದರು.

ಶಿರೋಳ ಭಾಗದಲ್ಲಿ ರೊಟ್ಟಿ ಜಾತ್ರೆಯ ಮೂಲಕ ಜನರಲ್ಲಿ ಸಾಮರಸ್ಯದ ಬೀಜ ಬಿತ್ತಿದ್ದ ಗುರುಬಸವ ಸ್ವಾಮಿಗಳು, ಶ್ರೀ ಸಾಮಾನ್ಯರ ಶ್ರೀಗಳಾಗಿದ್ದರು.


Spread the love

LEAVE A REPLY

Please enter your comment!
Please enter your name here