ನಟ ವಿಜಯ್ ದಳಪತಿ ತಮಿಳುನಾಡಿನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಐತಿಹಾಸಿಕ ಕ್ಷಣದಲ್ಲಿ ನಟಿ ತ್ರಿಷಾ ಕೃಷ್ಣನ್ ಭಾವನಾತ್ಮಕವಾಗಿ ಮಿಂಚಿದ್ದಾರೆ. ಸಮಾರಂಭದಲ್ಲಿ ಅವರ ಪ್ರತಿಕ್ರಿಯೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರಮಾಣವಚನ ಸಮಾರಂಭದಲ್ಲಿ ಹಾಜರಿದ್ದ ತ್ರಿಷಾ, ವಿಜಯ್ ವೇದಿಕೆ ಮೇಲೆ ಪ್ರಮಾಣವಚನ ಸ್ವೀಕರಿಸುತ್ತಿದ್ದ ವೇಳೆ ಕಣ್ಣೀರಿನಿಂದ ತುಂಬಿದ ಕಣ್ಣಿನೊಂದಿಗೆ ಗಮನ ಸೆಳೆದರು. ವಿಜಯ್ ಭಾಷಣ ಮುಗಿಸಿ ಜನರತ್ತ ಕೈಬೀಸಿದಾಗ, ತ್ರಿಷಾ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಹೆಮ್ಮೆಯಿಂದ ನಗುತ್ತಿರುವ ದೃಶ್ಯ ವೈರಲ್ ಆಗಿದೆ.
ವಿಜಯ್ ಮತ್ತು ತ್ರಿಷಾ ನಡುವಿನ ಆತ್ಮೀಯತೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಇದೇ ವೇಳೆ ವಿಜಯ್ ಅವರ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ, ಅವರ ಪತ್ನಿ ಮತ್ತು ಮಕ್ಕಳು ಸಮಾರಂಭಕ್ಕೆ ಗೈರಾಗಿದ್ದರು ಎನ್ನಲಾಗಿದೆ.
‘ಗಿಲ್ಲಿ’, ‘ಲಿಯೋ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿ, ಈಗ ರಾಜಕೀಯ ವೇದಿಕೆಯಲ್ಲೂ ಚರ್ಚೆಯ ಕೇಂದ್ರವಾಗಿದೆ. ಸ್ನೇಹಿತನ ರಾಜಕೀಯ ಏರಿಗೆಯನ್ನು ನೋಡಿ ತ್ರಿಷಾ ಭಾವುಕರಾದ ಕ್ಷಣ ಅಭಿಮಾನಿಗಳ ಮನ ಗೆದ್ದಿದೆ.
ರಾಜಕೀಯದ ಗಂಭೀರ ವಾತಾವರಣದ ನಡುವೆಯೂ ಈ ಭಾವನಾತ್ಮಕ ಕ್ಷಣವೇ ಸಮಾರಂಭದ ಪ್ರಮುಖ ಹೈಲೈಟ್ ಆಗಿ ಉಳಿದಿದೆ.

