ಚಾಮರಾಜನಗರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು!

0
Spread the love

ಚಾಮರಾಜನಗರ:- ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಚಂದಕವಾಡಿ ಹೋಬಳಿಯ ಬಸವನಪುರ ಗ್ರಾಮದಲ್ಲಿ ಜರುಗಿದೆ.

Advertisement

ಬಸವನಪುರ ಗ್ರಾಮದ 70 ವರ್ಷದ ಮಾದಪ್ಪ ಸಾವನ್ನಪ್ಪಿದ ದುರ್ದೈವಿ ಎನ್ನಲಾಗಿದೆ. ಮಂಗಳವಾರ ಸಂಜೆ ಸುರಿದ ಭಾರೀ ಮಳೆಗೆ ನೀರಿನ ತೊಂಬೆ ಬಳಿ ವಿದ್ಯುತ್ ತಂತಿ ತುಂಡಾಗಿತ್ತು. ರೈತ ಮಾದಪ್ಪ ಹಸುಗಳೊಂದಿಗೆ ಜಮೀನಿಗೆ ತೆರಳಿದ್ರು. ಮಳೆ‌ಕಾರಣ ತೊಂಬೆ ಬಳಿ ಆಶ್ರಯ ಪಡೆಯಲು ಆಗಮಿಸಿದಾಗ ಈ ದುರ್ಘಟನೆ ಸಂಭವಿಸಿದೆ.

ವಿದ್ಯುತ್ ತುಂಡಾಗಿದ್ದ ಹಿನ್ನೆಲೆ, ರೈತ ಮಾದಪ್ಪನಿಗೆ ವಿದ್ಯುತ್ ಶಾಕ್ ತಗುಲಿದೆ. ಮಲೆಮಹದೇಶ್ವರಬೆಟ್ಟಕ್ಕೆ ತೆರಳಿ ಮಾದಪ್ಪ ಬಂದಿದ್ದ. ಮಾದಪ್ಪನ ದೇವರ ದರ್ಶನ ಪಡೆದು ಬಂದ ರೈತ ಮಾದಪ್ಪನಿಗೆ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ.

ಚೆಸ್ಕಾಂ ನಿರ್ಲಕ್ಷ್ಯಕ್ಕೆ ರೈತ ಬಲಿ ಆಗಿದ್ದು, ಕೂಡಲೇ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಾಮಸಮುದ್ರ ಪೂರ್ವ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here