ಗದಗ-ಬೆಟಗೇರಿ ವಾರ್ಡ್ ನಂ. 13ರ ನಗರಸಭಾ ಸದಸ್ಯ ಮುತ್ತು ಮುಶಿಗೇರಿ ದಂಪತಿಗಳಿಂದ ಶ್ರೀ ಬನ್ನಿ ಮಹಾಕಾಳಿ ಸೇವಾ ಸಮಿತಿ ರೇಲ್ವೆ ಪೊಲೀಸ್ ಕ್ವಾರ್ಟ್ರರ್ಸ್ ಹತ್ತಿರ, ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ವೇ.ಮೂ ಹೇಮರಾಜ ಶಾಸ್ತ್ರಿ ಹಿರೇಮಠ (ಹೆಡಿಗ್ಗೊಂಡ) ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ ಇವರಿಂದ ಪುರಾಣ ಕಾರ್ಯಕ್ರಮ ಸತತ 9 ದಿನಗಳವರೆಗೆ ನಡೆಯಲಿದೆ. ಈ ಪವಿತ್ರ ಕಾರ್ಯಕ್ರಮದಲ್ಲಿ ಓಣಿಯ ಸಮಸ್ತ ಸುಮಂಗಲಿಯರು, ಗುರು-ಹಿರಿಯರು, ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.