ಯಾದಗಿರಿ:- ಪತ್ನಿ, ಅತ್ತೆ ಹಾಗೂ ಮಾವನನ್ನ ವ್ಯಕ್ತಿಯೋರ್ವ ಬರ್ಬರವಾಗಿ ಕೊಲೆ ಮಾಡಿದ ಘಟನೆ ಯಾದಗಿರಿ ತಾಲೂಕಿನ ಸೈದಾಪುರ ಬಳಿ ಜರುಗಿದೆ.
ಕೊಲೆಯಾದ ಮೂವರು ದಾವಣಗೆರೆ ಮೂಲದವರು ಎನ್ನಲಾಗಿದೆ. ಅನ್ನಪೂರ್ಣ (25) ಕವಿತಾ (45) ಬಸವರಾಜಪ್ಪ (52) ಕೊಲೆಯಾದವರು.
ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ನವೀನ್ (30) ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ದಾವಣಗೆರೆ ಮೂಲದ ಅನ್ನಪೂರ್ಣಳನನ್ನ ನವೀನ್ ಮದುವೆಯಾಗಿದ್ದ.
ಇಬ್ಬರು ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಕಳೆದ ಒಂದು ವರ್ಷದ ಹಿಂದೆ ಗಂಡನ ಕಿರುಕುಳ ತಾಳದೆ ವಾಪಸ್ ತವರು ಮನೆಗೆ ಅನ್ನಪೂರ್ಣ ಹೋಗಿದ್ದಳು. ಒಂದು ವರ್ಷ ತಂದೆ ತಾಯಿ ಜೊತೆಗೆ ಇದ್ದಳು. ನಿನ್ನೆ ಮತ್ತೆ ಜೊತೆಗೆ ಇರೋಣಾ ಅಂತ ನವೀನ್ ಕರೆದಿದ್ದ. ನ್ಯಾಯ ಪಂಚಾಯತಿ ಮಾಡಿ ಮತ್ತೆ ಜೊತೆಗಿರಲು ಪತಿ ಪತ್ನಿ ಮುಂದಾಗಿದ್ದರು. ಮಗಳನ್ನ ಗಂಡನ ಮನೆಗೆ ಬಿಡಲು ಅನ್ನಪೂರ್ಣ ಪೋಷಕರು ಬಂದಿದ್ದರು. ರಾಜೀ ಪಂಚಾಯತಿ ಬಳಿಕ ಅತ್ತೆ ಮಾವನನ್ನ ಬಸ್ ನಿಲ್ದಾಣಕ್ಕೆ ಕಾರಿನಲ್ಲಿ ಬಿಡಲು ಪತಿ ಪತ್ನಿ ಹೋಗಿದ್ರು.
ಈ ವೇಳೆ ಕಬ್ಬಿಣದ ರಾಡ್ ಹಾಗೂ ಚಾಕುನಿಂದ ನವೀನ್ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ವಡಗೇರ ತಾಲೂಕಿನ ಜೋಳದಡಗಿ ಬಳಿ ಶವ ಬಿಸಾಡಿದ್ದಾನೆ. ಸದ್ಯ ಅನ್ನಪೂರ್ಣ ಶವವನ್ನ ಪೊಲೀಸರು ಪತ್ತೆ ಮಾಡಿದ್ದು, ಸೈದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.