ಮೈಸೂರು: ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯೊಬ್ಬರನ್ನು ಯುವಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ ಹೃದಯಸ್ಪರ್ಶಿ ಘಟನೆ ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಕಪ್ಪಡಿ ದೇಗುಲದ ಬಳಿ ನಡೆದಿದೆ.
ಮಂಜು ಎಂಬಾತ ಸ್ನಾನಕ್ಕಾಗಿ ಕಾವೇರಿ ನದಿಗೆ ಇಳಿದಿದ್ದ ವೇಳೆ ಈಜು ಬಾರದ ಕಾರಣ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ. ಆತ ಜೀವದ ಹೋರಾಟ ನಡೆಸುತ್ತಿದ್ದುದನ್ನು ಗಮನಿಸಿದ ಮಧು ಎಂಬ ಯುವಕ ಕ್ಷಣಮಾತ್ರವೂ ವಿಳಂಬ ಮಾಡದೆ ನದಿಗೆ ಧುಮುಕಿದ. ಭೀಕರ ಪ್ರವಾಹದ ನಡುವೆ ಪ್ರಾಣಪಣವಾಗಿ ಹೋರಾಡಿ ಮಂಜುವನ್ನು ಸುರಕ್ಷಿತವಾಗಿ ಕರೆಯಕ್ಕೆ ತಂದಿದ್ದಾನೆ.
ಘಟನೆಯ ಬಳಿಕ ಕಪ್ಪಡಿ ಗ್ರಾಮದ ನಿವಾಸಿಗಳು ಮತ್ತು ಸ್ಥಳೀಯರು ಮಧು ಅವರ ಸಾಹಸಮಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವಕನ ಧೈರ್ಯ ಹಾಗೂ ಮಾನವೀಯತೆ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.



