ಮೈಸೂರು:- ಜಿಲ್ಲೆಯ ಹೆಚ್ಡಿ ಕೋಟೆಯ ಬೆಟ್ಟದಬೀಡು ಗ್ರಾಮದಲ್ಲಿ ಅವಘಡ ಒಂದು ಸಂಭವಿಸಿದೆ. ವಿದ್ಯುತ್ ತಂತಿ ತಗುಲಿ ಕ್ಯಾಂಟರ್ ಭಸ್ಮವಾಗಿದ್ದು, ಅದೃಷ್ಟವಶಾತ್ ಚಾಲಕ ಪವಾಡ ಎಂಬಂತೆ ಪಾರಾಗಿದ್ದಾನೆ.
Advertisement
ಕಬ್ಬಿನ ಸೋಗು ತುಂಬಿಕೊಂಡು ಬರುತ್ತಿದ್ದಾಗ ಗ್ರಾಮದ ಬಳಿ ಕ್ಯಾಂಟರ್ಗೆ ವಿದ್ಯುತ್ ತಂತಿ ತಗುಲಿದೆ. ಪರಿಣಾಮ ಕ್ಯಾಂಟರ್ ಹೊತ್ತಿ ಉರಿದಿದೆ. ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆಗೆ ಕ್ಯಾಂಟರ್ ಸಂಪೂರ್ಣ ಭಸ್ಮವಾಗಿದೆ.
ಅದೃಷ್ಟವಶಾತ್ ಚಾಲಕ ಘಟನೆಯಿಂದ ಗ್ರೇಟ್ ಪಾರಾಗಿದ್ದಾನೆ.