ಕಲಹದಿಂದ, ಯುದ್ಧದಿಂದ ಸಾಧನೆ ಮಾಡಲು ಸಾಧ್ಯವಿಲ್ಲ: ಕೆ.ಎಚ್.ಮುನಿಯಪ್ಪ

0
Spread the love

ಕೋಲಾರ: ಕಲಹದಿಂದ, ಯುದ್ಧದಿಂದ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಬ್ರಿಟಿಷರು 200 ವರ್ಷ ರಾಜ್ಯಭಾರ ಮಾಡಿದರು. ಆಗ ಅವರನ್ನು ನಾವು ಯುದ್ಧದಿಂದ ಗೆದ್ದಿಲ್ಲ, ಶಾಂತಿಯಿಂದ ಗೆದಿದ್ದು,

Advertisement

ಗಾಂಧೀಜಿಯವರು ನಾವು ಶಾಂತಿಯಿಂದ ಸಾಧನೆ ಮಾಡಬೇಕೆಂದು ಹೇಳಿದ್ದಾರೆ. ಭಯೋತ್ಪಾದಕರು ವಿನಾಕಾರಣ ನಮ್ಮ ಜನರ ಮೇಲೆ ದಾಳಿ ಮಾಡಿದ್ದಕ್ಕೆ ಸಂಘರ್ಷ ಉಂಟಾಗುತ್ತಿದೆ. ನಾವು ಪಾಕಿಸ್ತಾನ ಮೇಲೆ ಯುದ್ಧ ಮಾಡಿಲ್ಲ, ನಾಗರಿಕರ ಮೇಲೆ ದಾಳಿ ಮಾಡಿಲ್ಲ, ಆದರೆ ಭಾರತೀಯ ಸೇನೆ ಭಯೋತ್ಪಾದಕರ ಮೇಲೆ ಪ್ರಹಾರ ಮಾಡಿದ್ದಾರೆ ಎಂದರು.

ವ್ಯಾಜ್ಯ ಆಗುವಾಗ ಹಿರಿಯರೊಬ್ಬರು ಬಂದು ಯುದ್ಧ ಬೇಡವೆಂದಾಗ ಅವರಿಗೆ ಗೌರವ ಕೊಡಬೇಕು, ಭಾರತದ ಪ್ರಧಾನಿಯವರು ಅಮೆರಿಕ ದೇಶಕ್ಕೆ ಗೌರವ ಕೊಟ್ಟಿದ್ದಾರೆ. ಭಾರತ ದೇಶ ನಾಗರಿಕರನ್ನು ಕಳೆದುಕೊಂಡಿದೆ, ಕಲಹದಿಂದ, ಯುದ್ಧದಿಂದ ಸಾಧನೆ ಮಾಡಲು ಸಾಧ್ಯವಿಲ್ಲ, ನಾವೆಲ್ಲರೂ ಮಾನವರು, ಮಾನವರಾಗಿ ಬಾಳೋಣ, ಅವರವರ ಧರ್ಮ ಅವರು ಪಾಲನೆ ಮಾಡಿಕೊಳ್ಳಲಿ ಎಂದು ತಿಳಿಸಿದರು.

 


Spread the love

LEAVE A REPLY

Please enter your comment!
Please enter your name here