ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ಹಿರಿಯ ನಟಿ ಶೈಲಶ್ರೀ ಸುದರ್ಶನ್ ವೃದ್ಧಾಶ್ರಮ ಸೇರಿದ್ದಾರೆ. ಇದೀಗ ವಿಷಯ ತಿಳಿದ ನಟ ದರ್ಶನ್ ಅವರ ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಖ್ಯಾತ ಖಳನಟನಾಗಿ ಮಿಂಚಿದ್ದ ಸುದರ್ಶನ್ ಅವರು ಅನಾರೋಗ್ಯದಿಂದ ಕೆಲ ವರ್ಷಗಳ ಹಿಂದೆ ಕೊನೆಯುಸಿರೆಳೆದಿದ್ದರು. ಸುದರ್ಶನ್ ನಿಧನದ ಬಳಿಕ ಅವರ ಪತ್ನಿ ಹಿರಿಯ ನಟಿ ಶೈಲಶ್ರೀ ಸ್ವಂತ ಮನೆಯಿಲ್ಲದೇ ವೃದ್ಧಾಶ್ರಮ ಸೇರಿದ್ದರು. ಹಿರಿಯ ನಟಿ ಕಷ್ಟ ತಿಳಿದ ನಟ ದರ್ಶನ್ ಸಹಾಯಕ್ಕೆ ಮುಂದಾಗಿದ್ದಾರೆ.
ಶೈಲಶ್ರೀ ಅವರ ವಿಷಯ ತಿಳಿದ ದರ್ಶನ್ ಸಹೋದರ ದಿನಕರ್ ಮೂಲಕ ಹಣದ ಸಹಾಯ ಮಾಡಿದ್ದಾರೆ. 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟಿ ಶೈಲಶೀ ಆಶ್ರಯ ಇಲ್ಲದೇ ಬೆಂಗಳೂರಿನ ‘ಮಡಿಲು’ ವೃದ್ಧಾಶ್ರಮ ಸೇರಿದ್ದರು. ಈ ವಿಚಾರ ನಟ ದರ್ಶನ್ಗೆ ಗೊತ್ತಾಗಿ ನೆರವಿಗೆ ಧಾವಿಸಿದ್ದಾರೆ. ನಟಿಗೆ ಸಹೋದರನ ಮೂಲಕ 50,000 ರೂ. ಧನ ಸಹಾಯ ಮಾಡಿದ್ದಾರೆ. ಅಲ್ಲದೇ, ‘ಯಾವುದಾದರು ಬಾಡಿಗೆ ಮನೆಯಲ್ಲಿ ಇರುವುದಾದರೆ ನಾವು ಹಣ ನೀಡುತ್ತೇವೆ’ ಎಂದು ಸಹ ದರ್ಶನ್ ತಿಳಿಸಿದ್ದರಂತೆ.