ವಿಜಯಸಾಕ್ಷಿ ಸುದ್ದಿ, ಗದಗ : ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿ ವೀರಾಪುರ ಓಣಿಯ ಅಂಜಲಿ ಹತ್ಯೆಯು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
Advertisement
ಅಂಜಲಿ ಅಂಬಿಗೇರ ಕೊಲೆ ಖಂಡನೀಯವಾಗಿದ್ದು, ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಯುವತಿಯ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಗದುಗಿನ ದಲಿತ ಮಿತ್ರ ಮೇಳದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕುಮಾರ್ ನಡಗೇರಿ, ಉಪಾಧ್ಯಕ್ಷರು ವೆಂಕಟೇಶ್ ದೊಡಮನಿ, ಹುಲುಗಪ್ಪ ವಾಲ್ಮೀಕಿ, ಪ್ರದೀಪ್ ನಡಿಗೇರಿ, ಅಭಿಷೇಕ್ ಹಾದಿಮನಿ, ಮಣಿಕಂಠ ಅಕ್ಷಿಮನಿ, ಸಚ್ಚಿದಾನಂದ ನಡಿಗೇರಿ, ಪರಶುರಾಮ್ ಆಡಿನ, ಬಸವರಾಜ್ ಬನ್ನಿಮರ್ ಅನಿಲ್ ಮುಳ್ಳಾಲ್ ಮುಂತಾದವರಿದ್ದರು.