ರಾಜ್ಯ ಸರ್ಕಾರದಿಂದ ಉದಾಸೀನ ಧೋರಣೆ : ಕಳಕಪ್ಪ ಬಂಡಿ

0
kalakappa
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರಕಾರ ನಡೆದುಕೊಂಡ ಉದಾಸೀನ ಧೋರಣೆ ಎಲ್ಲರಿಗೂ ನೋವು ತರಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರನ್ನೆಲ್ಲ ದೇಶ ಬಿಟ್ಟು ಕಳಿಸಲಾಗುತ್ತಿದೆ ಎನ್ನುವ ಪುಕಾರನ್ನು ಕಾಂಗ್ರೆಸ್ ಹಬ್ಬಿಸುತ್ತಿದೆ. ಅಲ್ಪ ಸಂಖ್ಯಾತರಿಗೆ ಬದುಕಿ ಬಾಳಲು ಅತ್ಯಂತ ಸುರಕ್ಷಿತ ದೇಶವೆಂದರೆ ಅದು ಭಾರತ ಮಾತ್ರ. ನೀವೇನಾದರೂ ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಮತ ನೀಡಲು ಮುಂದಾದರೆ ನಿಮಗೆ ಸಂಕಷ್ಟಗಳು ಕಟ್ಟಿಟ್ಟ ಬುತ್ತಿ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಆರೋಪಿಸಿದರು.

ಬುಧವಾರ ನರೇಗಲ್ಲದಲ್ಲಿ ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪೂರ ಮಾತನಾಡಿ, ಅಕ್ಷಯ ಪಾತ್ರೆ ನೀಡಿರುವ ಮೋದಿಯವರ ಬಗ್ಗೆ ಕಾಂಗ್ರೆಸ್‌ನವರು ಚೊಂಬು ನೀಡಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಈ ಹುರುಳಿಲ್ಲದ ಆರೋಪದಿಂದ ಅವರ ಕೈಗೆ ಚೊಂಬು ಸಿಗಲಿದೆ. ಹಾಗಾಗಲು ನೀವೆಲ್ಲರೂ ಸ್ವಯಂ ಪ್ರೇರಣೆಯಿಂದ ಬೊಮ್ಮಾಯಿಯವರಿಗೆ ಮತದಾನ ಮಾಡಬೇಕೆಂದರು.

ಕಾಂಗ್ರೆಸ್ ಸರಕಾರ ನೀಡಿರುವ ಐದು ಗ್ಯಾರಂಟಿಗಳಲ್ಲಿ ಒಂದುದ ಗ್ಯಾರಂಟಿಯೂ ರೈತರ ಬಗ್ಗೆ ಇಲ್ಲದಿರುವುದು ಇದು ರೈತ ವಿರೋಧಿ ಸರಕಾರ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಲೋಕಸಭಾ ಚುನಾವಣೆಯ ನಂತರ ಈ ಸರಕಾರ ಬಹಳಷ್ಟು ದಿನಗಳು ಬಾಳುವುದಿಲ್ಲ. ನೀವು ಮತ್ತೆ ಶಾಸಕರಾಗಲು ಸಿದ್ಧರಾಗಿ ಎಂದು ಬಂಡಿಯವರಿಗೆ ಕಾಶೆಂಪೂರ ಸಲಹೆ ನೀಡಿದರು.

ಸಭೆಯನ್ನುದ್ದೇಶಿಸಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಮುಖಂಡರಾದ ಉಮೇಶ ಸಂಗನಾಳಮಠ, ಶಶಿಧರ ಸಂಕನಗೌಡ್ರ, ನ್ಯಾಯವಾದಿ ಎಂ.ಬಿ. ಸಜ್ಜನರ, ಮುತ್ತಣ್ಣ ಕಡಗದ ಮಾತನಾಡಿದರು. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕಳಕಪ್ಪ ಬಂಡಿ, ಜಿ.ಬಿ. ಪಾಟೀಲ, ಅಶೋಕ ನವಲಗುಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಎಫ್. ಮುಧೋಳ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here