ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಅಖಿಲ ಕರ್ನಾಟಕ ಬಸವ ಬಳಗ ಬೆಂಗೇರಿ, ಹುಬ್ಬಳ್ಳಿ ಇವರ ವತಿಯಿಂದ ಜ್ಞಾನಯೋಗಾಶ್ರಮ ವಿಜಯಪುರ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪುಣ್ಯಾರಾಧನೆ ಪ್ರಯುಕ್ತ ಅತ್ಯುತ್ತಮ ಸಮಾಜ ಸೇವೆಯನ್ನು ಪರಿಗಣಿಸಿ ಶಿರಹಟ್ಟಿಯ ಬೆಸ್ತರ ಸಮಾಜದ ಯುವ ಮುಖಂಡ ಅಶೋಕ ಹುಬ್ಬಳ್ಳಿ ಇವರಿಗೆ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Advertisement
ಮಾ.10ರ ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಶ್ರೀಗಳ ಜಯಂತ್ಯುತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾಮ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.