ಬೆಂಗಳೂರು ಮೆಟ್ರೋಗೆ ಬಸವೇಶ್ವರ ಹೆಸರು- MB ಪಾಟೀಲ್ ಹೇಳಿದ್ದೇನು!?

0
Spread the love

ವಿಜಯಪುರ;- ಬೆಂಗಳೂರು ಮೆಟ್ರೋಗೆ ನಮ್ಮ ಬಸವೇಶ್ವರ ಹೆಸರು ನಾಮಕರಣ ಸಂಬಂಧ ಬಿ ಎಂ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು,ಬೆಂಗಳೂರು ಮೆಟ್ರೋಗೆ ನಮ್ಮ ಬಸವೇಶ್ವರ ಮೆಟ್ರೊ ಎಂದು ನಾಮಕರಣ ಮಾಡಲು ನಾನು ಬದ್ಧವಾಗಿದ್ದೇನೆ. ಈ ಹಿಂದೆ ವೀರಶೈವ ಮಹಾಸಭಾದವರು ಇದನ್ನು ಹೇಳಿದರು.

ನಾಡಪ್ರಭು ಕೆಂಪೇಗೌಡ ಎಂದು ಕರೆಯುವಂತೆ, ಮೆಟ್ರೋಗೆ ನಾಮಕರಣ ಮಾಡಲು ಚಿಂತನೆ ನಡೆದಿದೆ. ಮಹಾರಾಷ್ಟ್ರದಲ್ಲಿ ಶಿವಾಜಿ ಮಹಾರಾಜರು ಸಾಂಸ್ಕೃತಿಕ ರಾಯಭಾರಿ ಆಗಿದ್ದಾರೆ. ಹಾಗೆ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಇಡುವ ಮೂಲಕ ಅವರ ಗೌರವ ಹೆಚ್ಚಿಸಲಾಗುತ್ತದೆ.

ಜಿಲ್ಲೆಗೆ ಬಸವೇಶ್ವರ ಹೆಸರು ಇಡೋದು ರಾಜಕಾರಣಿಗಳಿಂದ ಬಂದಿಲ್ಲ. ಇದು ಸಂಘ-ಸಂಸ್ಥೆಗಳಿಂದ ಬಂದಿದೆ. ಬಸವೇಶ್ವರ ಮೂರ್ತಿಯನ್ನು ಲಂಡನ್‌ನ ಥೇಮ್ಸ್ ನದಿ ದಡದಲ್ಲಿ ಸ್ಥಾಪನೆ ಮಾಡಲಾಗಿದೆ ಎಂದರು.

ಇಂಡಿ ಪ್ರತ್ಯೇಕ ಜಿಲ್ಲೆ ವಿಚಾರವಾಗಿ ಮಾತನಾಡಿದ ಅವರು, ಕಾಲಕಾಲಕ್ಕೆ ತಕ್ಕಂತೆ ಸರ್ಕಾರ ನಿರ್ಧಾರ ಮಾಡುತ್ತದೆ. ಅದು ಅಲ್ಲಿಯ ಶಾಸಕರ ಬೇಡಿಕೆ ಇರುತ್ತದೆ. ಅದು ಸ್ವಾಭಾವಿಕ. ಅದು ತಪ್ಪಲ್ಲ ಎಂದು ಹೇಳಿದರು.

ಬಸವನಾಡು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಸವೇಶ್ವರ ಜನ್ಮಸ್ಥಳ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನ ಸರ್ಕಾರದಿಂದ ಆಗಬೇಕಿದೆ. ಕೂಡಲಸಂಗಮದಲ್ಲಿ ಅಭಿವೃದ್ಧಿ ಆಗಬೇಕು. ನಾನೇ ₹139 ಕೋಟಿ ಮ್ಯೂಸಿಯಂಗೆ ಕೊಟ್ಟಿದ್ದೆ. ಅದು ಕಾರಣಾಂತರಗಳಿಂದ ತಕ್ಕಮಟ್ಟಿಗೆ ಅಭಿವೃದ್ಧಿ ಆಗಿಲ್ಲ ಎಂದರು.


Spread the love

LEAVE A REPLY

Please enter your comment!
Please enter your name here