ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಗರ ಮಹಾಚಕ್ರವರ್ತಿ, ದಿಲೀಪ ಮಹಾಚಕ್ರವರ್ತಿ, ಸತ್ಯಹರಿಶ್ಚಂದ್ರ, ಶ್ರೀರಾಮಚಂದ್ರ ಹೀಗೆ ಬಹಳಷ್ಟು ದೈವಾಂಶ ಸಂಭೂತರು, ಮಹಾತ್ಮರು ಸಿಗುತ್ತಾರೆ. ಅವರಲ್ಲಿ ಭಗೀರಥ ಮಹರ್ಷಿಯ ಜೀವನಕಥೆ ಸ್ಪೂರ್ತಿದಾಯಕ ಎಂದು ಕಂದಾಯ ನಿರೀಕ್ಷಕ ಎಚ್.ಎಂ. ಸೀತಿಮನಿ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಭಗೀರಥ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಇಕ್ಷ್ವಾಕು ವಂಶದ ಪರಂಪರೆ ಅಂದರೆ ಸೂರ್ಯವಂಶದ ಕ್ಷತ್ರಿಯರು. ಈ ಭರತಖಂಡವನ್ನು ಆಳಿದವರಲ್ಲಿ ಅನೇಕ ಖ್ಯಾತನಾಮರಿದ್ದಾರೆ. ಲೋಕ ಕಲ್ಯಾಣಕ್ಕೆ ನಿರಂತರ ಶ್ರಮವಹಿಸಿ ಯಶಸ್ಸು ಪಡೆದ ಮಹಾತ್ಮ ಮಹರ್ಷಿ ಭಗೀರಥರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಸ್.ಕೆ. ದೊಡ್ಡಣ್ಣವರ, ರಮೇಶ ಹಲಗಿ, ಅಡಿವೆಪ್ಪ ಮೇಣಸಗಿ, ವಿ.ಐ. ಮಡಿವಾಳರ, ಉದಯ ಮುದೇನಗುಡಿ, ಮಹಾದೇವ ಮ್ಯಾಗೇರಿ, ಎನ್.ಬಿ. ಬೇಲೇರಿ, ಕಾವ್ಯಾ ಅರವಟಗಿಮಠ, ಪಿ.ಜಿ. ರಾಂಪೂರ, ನೀಲಪ್ಪ ಚಳ್ಳಮರದ, ಫಕ್ಕೀರೇಶ ತಮ್ಮಣ್ಣವರ, ನಿಂಗಪ್ಪ ಮಡಿವಾಳರ, ಸಿ.ವಿ. ಹೊನವಾಡ, ಜೆ.ಡಿ. ಬಂಕಾಪೂರ ಸೇರಿದಂತೆ ಇತರರು ಇದ್ದರು.