ಬಿಜೆಪಿ ಅವರಿಗೆ ಕಣ್ಣು, ಕಿವಿ ಹಾಗೂ ಬಾಯಿನೂ ಇಲ್ಲ: ಎನ್‌.ಎಸ್.ಬೋಸರಾಜು

0
Spread the love

ರಾಯಚೂರು: ಬಿಜೆಪಿ ಅವರಿಗೆ ಕಣ್ಣು, ಕಿವಿ ಹಾಗೂ ಬಾಯಿನೂ ಇಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್.ಬೋಸರಾಜು ಕಿಡಿಕಾರಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ಒಂದು ಸಮುದಾಯಕ್ಕೆ ಸೇರಿರೋದು. ವಕ್ಫ್ ಬೋರ್ಡ್ ಆಸ್ತಿ ಎಂದು ಕ್ಲೇಮ್ ಮಾಡಿರಬಹುದು. ರೆಕಾರ್ಡ್ ನೋಡಿಕೊಂಡು ಸರಿಪಡಿಸುತ್ತೇವೆ.

Advertisement

ಬೊಮ್ಮಾಯಿ ಸಿಎಂ ಆಗಿದ್ದಾಗ 216 ಕಡೆ ಈ ರೀತಿ ನೋಟಿಸ್ ಕೊಟ್ಟಿದ್ದರು. ಬೊಮ್ಮಾಯಿಯವರು ವಕ್ಫ್ ಸಭೆಯಲ್ಲಿ ವಕ್ಫ್ ಆಸ್ತಿ ಕಬಳಿಕೆ ಆಗಿದೆ ಅದನ್ನು ಖಾಲಿ ಮಾಡಬೇಕು ಎಂದು ಹೇಳಿದ್ದರು. 216 ಕಡೆ ನೋಟಿಸ್ ಕೊಟ್ಟಿರುವ ರೆಕಾರ್ಡ್ ನಮ್ಮ ಬಳಿ ಇದೆ. ಹೀಗಿದ್ದರೂ ನಮ್ಮ ಮೇಲೆ ಆಪಾದನೆ ಮಾಡುತ್ತಾರೆ. ಅಂದರೆ ಬಿಜೆಪಿ ಅವರಿಗೆ ಕಣ್ಣು, ಕಿವಿ ಹಾಗೂ ಬಾಯಿನೂ ಇಲ್ಲ ಎಂದು ಕಿಡಿಕಾರಿದರು.

ಮೋದಿಯವರ ಶಿಷ್ಯರೆಲ್ಲಾ ಇದ್ದಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಯಾರಿದ್ದಾರೆ? ರಾಜ್ಯದಲ್ಲಿ ಸಾವಿರಾರು ಕೋಟಿ ರೂ. ಲೂಟಿ ಮಾಡಿದ್ದಾರೆ. ಅದನ್ನ ನಾವು ಹೇಳುತ್ತಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಅವರಾಗಿಯೇ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ನಾವೇನು ಮಾತನಾಡುವುದು? ಇದೆಲ್ಲಾ ಜನರಿಗೆ ಗೊತ್ತಾಗಿದೆ. ಬಿಜೆಪಿಯವರ ಕಥೆ ಮುಗಿದು ಹೋಗುತ್ತದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here