HomeGadag Newsಶತಮಾನಗಳ ಸಂಪ್ರದಾಯ ಜೀವಂತ: ಮಾಡಲಗೇರಿಯಿಂದ ಬದಾಮಿ ದೇವಾಲಯಕ್ಕೆ ರಥ ಹಗ್ಗದ ಸಾಗಾಟ

ಶತಮಾನಗಳ ಸಂಪ್ರದಾಯ ಜೀವಂತ: ಮಾಡಲಗೇರಿಯಿಂದ ಬದಾಮಿ ದೇವಾಲಯಕ್ಕೆ ರಥ ಹಗ್ಗದ ಸಾಗಾಟ

For Dai;y Updates Join Our whatsapp Group

Spread the love

ಗದಗ: ಇಂದು ಬದಾಮಿ ಬನಶಂಕರಿ ದೇವಿ ರಥೋತ್ಸವದ ಹಿನ್ನೆಲೆಯಲ್ಲಿ ದೇವಿಯ ತವರೂರು ಮಾಡಲಗೇರಿ ಗ್ರಾಮ ಸಡಗರ–ಸಂಭ್ರಮದಿಂದ ಕಂಗೊಳಿಸಿತು. “ತವರೂರಿನ ಹಗ್ಗ ಹೋದ್ರೆ ಮಾತ್ರ ಬನಶಂಕರಿ ರಥೋತ್ಸವ” ಎಂಬ ಶತಮಾನಗಳ ಪರಂಪರೆಯಂತೆ, ರಥ ಎಳೆಯುವ ಹಗ್ಗವನ್ನು ಮಾಡಲಗೇರಿಯಿಂದ ಐತಿಹಾಸಿಕ ಬದಾಮಿ ಬನಶಂಕರಿ ದೇವಾಲಯದತ್ತ ಅದ್ಧೂರಿಯಾಗಿ ಸಾಗಿಸಲಾಯಿತು.

ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ಹಗ್ಗ ಸಾಗಾಟಕ್ಕೆ ಭರ್ಜರಿ ಮೆರವಣಿಗೆ ಆಯೋಜಿಸಲಾಗಿತ್ತು. ಹಗ್ಗ ಸಾಗಿಸುವ ಎತ್ತಿನ ಬಂಡಿಯನ್ನು ಬಾಳೆ ಗಿಡ, ತಳಿರು ತೋರಣ, ಹೂವುಗಳಿಂದ ಸಿಂಗಾರ ಮಾಡಲಾಗಿದ್ದು, ಕಟ್ಟು ಮಸ್ತಾದ ಎತ್ತುಗಳಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು.

ಹಗ್ಗ ಹಾಗೂ ಅದನ್ನು ಹೊತ್ತ ಬಂಡಿಗೆ ಪೂಜೆ ಸಲ್ಲಿಸಿ, ಬ್ಯಾಂಡ್, ಹಲಗೆ ಮಜಲುಗಳ ಅಬ್ಬರ, ಪಟಾಕಿ ಸಿಡಿಸಿ ಗ್ರಾಮಸ್ಥರು ಸಂಭ್ರಮಿಸಿದರು. ಶತಮಾನಗಳಿಂದ ಪುಂಡಿ ನಾರಿನಿಂದ ತಯಾರಿಸಲಾದ ರಥೋತ್ಸವದ ಹಗ್ಗವನ್ನು ಹದಿನಾರು ಎತ್ತುಗಳ ಹೂಡಿ ಬಂಡಿಯಲ್ಲಿ ಎಳೆಯುತ್ತಾ ಸಾಗಿಸುವ ದೃಶ್ಯ ಭಕ್ತರನ್ನು ಮಂತ್ರಮುಗ್ಧಗೊಳಿಸಿತು.

ಮಲಪ್ರಭಾ ನದಿಯ ಮಾರ್ಗವಾಗಿ ಎತ್ತಿನ ಬಂಡಿಯಲ್ಲಿ ರಥ ಹಗ್ಗವನ್ನು ಸಾಗಿಸಿ, ಬದಾಮಿ ಬನಶಂಕರಿ ದೇವಾಲಯಕ್ಕೆ ತಲುಪಿಸುವ ಈ ಐತಿಹಾಸಿಕ ಸಂಪ್ರದಾಯ ಇಂದಿಗೂ ಜೀವಂತವಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!