ಚಿತ್ರದುರ್ಗ : ವ್ಯಕ್ತಿ ತಲೆ ಮೇಲೆ ಸಿಮೆಂಟ್​​ ಕಲ್ಲು ಎತ್ತಿ ಹಾಕಿ ಕೊಲೆ!

0
Spread the love

ಚಿತ್ರದುರ್ಗ:- ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಬಳಿಕ ಆತನ ತಲೆ ಮೇಲೆ ಸಿಮೆಂಟ್ ಕಲ್ಲು ಎತ್ತು ಹಾಕಿ ಕೊಲೆ ಮಾಡಿರುವ, ಘಟನೆ ಚಿತ್ರದುರ್ಗದ ರೈಲ್ವೇ ಕ್ವಾಟ್ರಸ್ ನ ಗಿಡಗಳ ಪೊದೆಯಲ್ಲಿಂದು‌ ಜರುಗಿದೆ.

Advertisement

ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಕೊಲೆಗೀಡಾದ ವ್ಯಕ್ತಿಯನ್ನು ಬಾಗಲಕೋಟೆಯ ಬಸವರಾಜ್ ಬೇವೂರು ಎಂದು ಗುರುತಿಸಲಾಗಿದೆ.

ಅನೈತಿಕ ಸಂಬಂಧದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಶ್ವಾನದಳ ಮತ್ತು ಸುಕೋ ತಂಡ ಭೇಟಿ‌ ನೀಡಿ, ಪರಿಶೀಲಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಎಎಸ್ಪಿ ಕುಮಾರಸ್ವಾಮಿ,ಭೇಟಿ‌ ನೀಡಿ ಮಾಹಿತಿ ಪಡೆದಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here