ದೆಹಲಿ ಸ್ಫೋಟ: ಈ ಬ್ಲಾಸ್ಟ್ʼ​ಗೆ ಅತ್ಯಂತ ವ್ಯವಸ್ಥಿತವಾದ ಪಿತೂರಿ ಮಾಡಿದ್ದರು – ಬಿ.ಎಸ್. ಯಡಿಯೂರಪ್ಪ

0
Spread the love

ಶಿವಮೊಗ್ಗ: ರಾಜಧಾನಿ ದೆಹಲಿಯನ್ನು ಬೆಚ್ಚಿಬೀಳಿಸಿದ ಭೀಕರ ಸ್ಪೋಟದ ಘಟನೆಯ ನಂತರ ದೇಶದಾದ್ಯಂತ ಆತಂಕದ ವಾತಾವರಣ ಮನೆ ಮಾಡಿದೆ. ನವೆಂಬರ್ 10 ರಂದು ಕೆಂಪು ಕೋಟೆಯ ಬಳಿ ಸಂಭವಿಸಿದ ಈ ಸ್ಪೋಟದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ  ಪ್ರತಿಕ್ರಿಯೇ ನೀಡಿದ್ದಾರೆ.

Advertisement

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ದೆಹಲಿ ಬ್ಲಾಸ್ಟ್​ಗೆ ಅತ್ಯಂತ ವ್ಯವಸ್ಥಿತವಾದ ಪಿತೂರಿ ಮಾಡಿದ್ದರು. ಅಲ್ಯೂಮೀನಿಯಂ ಸಲ್ಪೇಟ್ ರಾಸಾಯನಿಕ ಬಳಕೆ ಮಾಡಿ ಬ್ಲಾಸ್ಟ್ ಮಾಡಿದ್ದಾರೆ. ಇದರ ಹೊಣೆಹೂತ್ತವರಿಗೆ ಗತಿ ಕಾಣಿಸುವುದಾಗಿ ಪ್ರಧಾನಮಂತ್ರಿ ಹಾಗು ಗೃಹ ಸಚಿವರು ಹೇಳಿದ್ದಾರೆ.

ದೊಡ್ಡ ಅನಾಹುತವಾಗುವುದನ್ನು ತಡೆದಿದ್ದಾರೆ. ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಲಾಗಿದೆ. ಬಹಳ ಪ್ರಮಾಣದಲ್ಲಿ ಈ ಕೃತ್ಯದಲ್ಲಿ ಒಂದು ಸಮಾಜದವರು ಭಾಗಿಯಾಗಿರುವುದು ಜಗಜ್ಜಾಹೀರಾಗಿದೆ. ಇದನ್ನು ನಾನು ಖಂಡಿಸುತ್ತೇನೆ. ಸ್ವಲ್ಪ ಯಾಮಾರಿದ್ದರೂ ಸಹ ದೊಡ್ಡ ಅನಾಹುತವಾಗುತ್ತಿತ್ತು. ಬಹಳ ಆಶ್ಚರ್ಯಕರ ಸಂಗತಿ ಎಂದರೆ, ದಾಳಿ ಹಿಂದೆ ಇರುವವರು ಮಹಿಳಾ ಹಾಗೂ ಪುರುಷ ವೈದ್ಯರು ಎಂದರು.


Spread the love

LEAVE A REPLY

Please enter your comment!
Please enter your name here