ದೇವನಹಳ್ಳಿ:- ಬೈಕ್-ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ದುರ್ಮರಣ ಹೊಂದಿರುವ ಘಟನೆ ದೇವನಹಳ್ಳಿ ಹಳ್ಳಿ ತಾಲೂಕಿನ ನೆರಗನಹಳ್ಳಿ ಬಳಿ ನಡೆದಿದೆ.
Advertisement
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಜ್ಜು ಗುಜ್ಜಾಗಿದ್ದು, ಬೈಕ್ ನಲ್ಲಿ ಚಲಿಸುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ದಲ್ಲಿ ಉಗನವಾಡಿಯ ವೆಂಕಟೇಶ್ (50), ಹಾಗೂ ಕಸವನಹಳ್ಳಿ ಯ ಮಹೇಶ್ (30) ಮೃತಪಟ್ಟವರು.
ಇನ್ನೂ ಅಪಘಾತದಲ್ಲಿ ಮೃತ ಪಟ್ಟ ದೇಹಗಳನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆ ಗೆ ರವಾನೆ ಮಾಡಲಾಗಿದ್ದು, ಆಸ್ಪತ್ರೆಯ ಬಳಿ ಮೃತರ ಕುಟುಂಬಸ್ಥರು ಜಮಾಯಿಸಿ ಕಣ್ಣೀರು ಹಾಕಿದ್ದಾರೆ.