ವೈದ್ಯರ ಮೇಲೆ ವಿಶ್ವಾಸವನ್ನಿಡಿ : ಡಾ. ಕೆ.ಬಿ. ಧನ್ನೂರ

0
Doctor's Day Program
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ವೈದ್ಯರು ಆಧುನಿಕ ಕಾಲದ ಸಂಜೀವಿನಿಯಾಗಿದ್ದಾರೆ. ಅವರ ಬಳಿಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರು ಅವರ ಮೇಲೆ ವಿಶ್ವಾಸವನ್ನಿಟ್ಟರೆ ಗುಣಮುಖರಾಗಲು ಸಾಧ್ಯ. ಸುದೈವದಿಂದ ನರೇಗಲ್ಲ ಮತ್ತು ಸುತ್ತಲಿನ ಜನತೆ ಎಂದಿಗೂ ವೈದ್ಯರ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳದಿರುವುದಕ್ಕೆ ಹಿಂದಿನ ವೈದ್ಯರು ಹಾಕಿಕೊಟ್ಟ ಪಾಠವೇ ಕಾರಣ ಎಂದು ಡಾ. ಕೆ.ಬಿ. ಧನ್ನೂರ ಹೇಳಿದರು.

Advertisement

ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಬೀಚಿ ಬಳಗದ ಆಶ್ರಯದಲ್ಲಿ ಜರುಗಿದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮ್ಮ ವೈಯಕ್ತಿಕ ಜೀವನವನ್ನೂ ಮರೆತು ವೈದ್ಯರು ರೋಗಿಗಳ ಸೇವೆಗೆ ಹಗಲಿರುಳೂ ಶ್ರಮಿಸುತ್ತಾರೆ. ಮೊದಲ ಹಂತದಲ್ಲಿಯೆ ರೋಗಿಯನ್ನು ಉಪಚಾರಕ್ಕೆಂದು ಕರೆದುಕೊಂಡು ಬಂದರೆ ಆ ರೋಗಿಯನ್ನು ಸಂಪೂರ್ಣ ವಾಗಿ ಗುಣಪಡಿಸಬಹುದು. ಆದರೆ ಕೊನೆಯ ಹಂತದಲ್ಲಿ ಕರೆದುಕೊಂಡು ಬಂದು ನಂತರ ವೈದ್ಯರನ್ನು ದೂರುವುದು ಸರಿಯಲ್ಲ. ಇದನ್ನು ರೋಗಿಗಳ ಸಂಬಂಧಿಕರು ತಿಳಿದುಕೊಳ್ಳಬೇಕು. ಪಟ್ಟಣದ ಬೀಚಿ ಬಳಗದ ಸಾಹಿತ್ತಿಕ ಮತ್ತು ಸಾಮಾಜಿಕ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಡಾ. ಜಿ.ಕೆ. ಕಾಳೆ ಮಾತನಾಡಿ, ಕಳೆದ ಮೂರೂವರೆ ದಶಕಗಳಿಂದ ನಾವು ನರೇಗಲ್ಲ ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳ ಜನತೆಗೆ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದ್ದೇವೆ. ಮೊತ್ತಮೊದಲಿಗೆ ನಮ್ಮ ಸೇವೆಯನ್ನು ಗುರುತಿಸಿ ನಮ್ಮನ್ನು ಸನ್ಮಾನಿಸಿದ ಸಂಸ್ಥೆಯೆಂದರೆ ಅದು ಬೀಚಿ ಬಳಗ. ಈ ಬಳಗವು ನೀಡಿದ ಈ ಸನ್ಮಾನವನ್ನು ನಾವೆಂದಿಗೂ ಮರೆಯುವುದಿಲ್ಲ ಎಂದರು.

ಸಭೆಯನ್ನುದ್ದೇಶಿಸಿ ಡಾ. ಕೃಷ್ಣಾ ಜಿ.ಕಾಳೆ, ಡಾ. ಆರ್.ಕೆ. ಗಚ್ಚಿನಮಠ, ಡಾ. ಎಲ್.ಎಸ್. ಗೌರಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ ಮಾತನಾಡಿದರು, ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಡಾ. ಡೇನಿಯಲ್ ಫ್ರೆಡ್ರಿಕ್ಸ್, ಡಾ. ಸಪ್ನಾ ಕಾಳೆ, ಡಾ. ನಿರ್ಮಲಾ ನಾಶಿಪುಡಿ, ಡಾ. ಶಿವಯ್ಯ ರೋಣದ, ಡಾ. ನಾಗರಾಜ ಗ್ರಾಮಪುರೋಹಿತ, ಡಾ. ಎಲ್.ಆರ್. ರಡ್ಡೇರ, ಡಾ. ಜುಬೇದಾ ರೋಣದ, ವೈದ್ಯೆ ಕುರಿ, ಯೋಗಾ ಥೆರಪಿಸ್ಟ್ ಅಶ್ವಿನಿ ರಡ್ಡೇರ, ಡಾ. ಸುಷ್ಮಾ ಸಂಗನಾಳಮಠ ಇನ್ನೂ ಮುಂತಾದವರನ್ನು, ಕಾಯಕ ರತ್ನ ಪ್ರಶಸ್ತಿ ಪುರಸ್ಕೃತ ಮುತ್ತು ಹಡಪದ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ಮಾತನಾಡಿ ನಮ್ಮ ಜೀವ ಉಳಿಸುವ ಎಲ್ಲ ವೈದ್ಯರುಗಳನ್ನು ಒಂದೇ ವೇದಿಕೆಯಲ್ಲಿ ಕಂಡು ಸಂತಸವಾಗಿದೆ. ಈ ಎಲ್ಲರನ್ನೂ ಸನ್ಮಾನಿಸುವ ಸೌಭಾಗ್ಯ ಬೀಚಿ ಬಳಗಕ್ಕೆ ದೊರಕಿರುವುದು ಅತ್ಯಂತ ಸಂತೋಷವನ್ನುಂಟು ಮಾಡಿದೆ ಎಂದರು.

ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಬಿ.ಬಿ. ಕುರಿ, ಶಿಕ್ಷಕ ಬಿ.ಟಿ. ತಾಳಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎ. ಅರವಟಗಿಮಠ, ಶಿಕ್ಷಕ ಸಿ.ಕೆ. ಕೇಸರಿ, ಎಂ.ಎಚ್. ಸಿದ್ದಿ, ಮಾಜಿ ಯೋಧರಾದ ಶಿವಪುತ್ರಪ್ಪ ಸಂಗನಾಳ, ಪ್ರಭು ಮುಕ್ಕನಗೌಡ್ರ, ಶಿವಯೋಗಿ ಜಕ್ಕಲಿ, ವಿ.ಎ. ಕುಷ್ಟಗಿ, ಮುಖ್ಯೋಪಾಧ್ಯಾಯೆ ಎನ್.ಎಸ್. ಹಿರೇಮಠ, ಕೆ.ಎಸ್. ಹಡಪದ, ರಾಜಶೇಖರಗೌಡ ಪಾಟೀಲ, ಜಿ.ಎ. ಬೆಲ್ಲದ, ಮುಖ್ಯೋಪಾಧ್ಯಾಯೆ ಭಾರತಿ ಶಿರ್ಸಿ, ಎಸ್.ಕೆ. ಪಾಟೀಲ, ನಿವೃತ್ತ ಶಿಕ್ಷಕಿ ಎಚ್.ಎಂ. ರತ್ನಮ್ಮ, ಶಿಕ್ಷಕಿ ಟಿ.ಜಿ. ಕಂಬಾಳಿಮಠ, ಮುಖ್ಯ ಶಿಕ್ಷಕ ಪ್ರಭುಸ್ವಾಮಿಮಠ, ಎ.ಎಸ್. ಅಣಗೌಡ್ರ, ದೈಹಿಕ ಶಿಕ್ಷಕ ಆರ್.ಎಸ್. ನರೇಗಲ್ಲ, ಶಿಕ್ಷಕ ವಿ.ಎ. ಕುಂಬಾರ, ಬೀಚಿ ಬಳಗದ ಸದಸ್ಯರು ಪಾಲ್ಗೊಂಡಿದ್ದರು.

ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಾಮುದ್ರಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇಲ್ಲಿನ ಜನತೆಯ ಮತ್ತು ಪಟ್ಟಣದ ಹಿರಿಯ ವೈದ್ಯರ ಸಹಕಾರ ಮತ್ತು ಮಾರ್ಗದರ್ಶನವನ್ನು ನನ್ನ ಜೀವನದಲ್ಲಿ ಮರೆಯಲಾರೆ. ಬೀಚಿ ಬಳಗವು ನನ್ನ ಸೇವೆಯನ್ನು ಗುರತಿಸಿ ನನ್ನನ್ನೂ ಸನ್ಮಾನಿಸಿರುವುದು ನನ್ನ ಜೀವನದ ಅವಿಸ್ಮರಣೀಯ ಘಟನೆಗಳಲ್ಲಿ ಒಂದಾಗಿದೆ ಎಂದರು.

 


Spread the love

LEAVE A REPLY

Please enter your comment!
Please enter your name here