ನಾಟಕ ಕಲೆಯನ್ನು ಉಳಿಸಬೇಕಿದೆ : ದಶರಥರಾಜ ಕೊಳ್ಳಿ

0
nataka
Spread the love

ವಿಜಯಸಾಕ್ಷಿ ಸುದ್ದಿ, ಬೆಟಗೇರಿ : ಬೆಟಗೇರಿ ಹಳೆ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಕೆರೂರಿನ ಶ್ರೀ ದಯಾನಂದ ಪುರಿ ನಾಟ್ಯ ಮಂಡಳಿ ಇವರು `ಶ್ರೀ ದೇವಲ ಮಹರ್ಷಿ’ ಪೌರಾಣಿಕ ನಾಟಕ ಪ್ರದರ್ಶಿಸಿದರು.

Advertisement

ಉದ್ಘಾಟನಾ ಸಮಾರಂಭದಲ್ಲಿ ದಶರಥರಾಜ ಕೊಳ್ಳಿ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ನಾಟಕಗಳು ಕಣ್ಮರೆಯಾಗುತ್ತಿವೆ. ಕಲಾವಿದರ ಬದುಕು ದುಸ್ತರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹವ್ಯಾಸಿ ಕಲಾವಿದರು ನಾಟಕದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಈ ದಿಶೆಯಲ್ಲಿ ಉತ್ತರ ಕರ್ನಾಟಕದ ನೇಕಾರರ ಕೊಡುಗೆ ಹೆಚ್ಚಾಗಿದೆ. ಬೆಟಗೇರಿ, ಸೂಳೇಬಾವಿ, ಕೆರೂರು ಗುಳೇದಗುಡ್ಡ ಹೀಗೆ ನೇಕಾರರು ವಾಸಿಸುವ ಭಾಗಗಳಲ್ಲಿ ಜಾತ್ರೆ ಬಂತು ಅಂದರೆ ಅಲ್ಲಿ ನಾಟಕದ ಪ್ರಯೋಗ ಆಗುತ್ತದೆ. ಆ ಭಾಗಗಳಲ್ಲಿ ನಾಟಕವನ್ನು ನೋಡುವ ಪ್ರೇಕ್ಷಕರು ಇರುವುದು ಸಂತೋಷದ ಸಂಗತಿ ಎಂದರು.

ಕೆರೂರಿನಿಂದ ಆಗಮಿಸಿದ್ದ ನಾಟ್ಯ ಮಂಡಳಿಯ ಎಲ್ಲಾ ಕಲಾವಿದರನ್ನು ಅನಿಲ ಗಡ್ಡಿ ಗುಗ್ಗರಿ ಮುಂತಾದವರು ಗೌರವಿಸಿದರು.


Spread the love

LEAVE A REPLY

Please enter your comment!
Please enter your name here