ವಿಜಯಸಾಕ್ಷಿ ಸುದ್ದಿ, ಗದಗ : ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೊರಗುತ್ತಿಗೆ ಕಾರ್ಮಿಕರ ಸಂಘದ ವತಿಯಿಂದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ರಕ್ತದಾನ ಹಾಗೂ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ನೀಡುವುದರ ಮೂಲಕ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಳ್ಳಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಮಾತನಾಡಿ, ರಕ್ತದಾನ ಮಾಡಿದ ಎಲ್ಲ ಸಿಬ್ಬಂದಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು. ಅತಿಥಗಳಾಗಿ ಆಗಮಿಸಿದ ಜಿಮ್ಸ್ನ ವೈದ್ಯಕೀಯ ಅಧೀಕ್ಷಕ ರೇಖಾ ಸೋನಾವನೆ, ಅಶೋಕ ಆಚಾರ, ಹಿರಿಯ ನರ್ಸಿಂಗ್ ಅಧಿಕಾರಿ ಜಡಿ, ಸಂಘದ ಪದಾಧಿಕಾರಿಗಳಾದ ರಾಜು ಸಾಬೋಜಿ, ರಾಘವೇಂದ್ರ ನಾಗನಾಥನಹಳ್ಳಿ, ವಿವೇಕ ಮಾನೆ, ಹುಲಿಗೇಶ ಬಳ್ಳಾರಿ, ಮೈಲಾರಿ ಹಾದಿಮನಿ, ಮಂಜುನಾಥ ರಾಮೇನಹಳ್ಳಿ, ಹುಲಿಗೇಶ ಚೌಡಮ್ಮನವರ, ಭೀಮಪ್ಪ ದೊಡ್ಡಮನಿ, ಇಜಾಜಖಾನ ಧಾರವಾಡ, ಮಮತಾಜ ರೋನ, ರಜಿಯಾ ಅನ್ಸಾರೆ, ವಿಜಯಲಕ್ಷ್ಮಿ ಗೊಲ್ಲರ, ವೇದಾ ಸುಣಗಾರ, ನಾಗರಾಜ ಯರಗುಡಿ, ಮಂಜುನಾಥ ದೊಡ್ಡಮನಿ, ಶರಣಪ್ಪ ಚಿನ್ನಮ್ಮನವರ, ಮಾಂತೇಶ ದೊಡ್ಡಮನಿ, ಸಾಗರ ಚಲವಾದಿ, ಚಂಪಾವತಿ ಗುಳೇದ, ಮಾರ್ತಾಂಡ ಹೊನ್ನಿನಾಯ್ಕರ್, ಕಿರಣ ಮಡಿವಾಳರ, ಪ್ರವೀಣ ಅಸೂಟಿ, ಮಾಂತೇಶ ಹಾದಿಮನಿ, ಮಂಜುನಾಥ ಪೂಜಾರ, ದುರಗಪ್ಪ ಚೌಳ್ಳಪ್ಪನವರ, ಮಲ್ಲಪ್ಪ ಹಾದಿಮನಿ, ಸಂತೋಷ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.