HomeKarnataka Newsಶ್ರೀರಂಗಪಟ್ಟಣ ದಸರಾಗೆ ಚಾಲನೆ ಕೊಟ್ಟ ಖ್ಯಾತ ನಟ ಶಿವರಾಜ್ ಕುಮಾರ್!

ಶ್ರೀರಂಗಪಟ್ಟಣ ದಸರಾಗೆ ಚಾಲನೆ ಕೊಟ್ಟ ಖ್ಯಾತ ನಟ ಶಿವರಾಜ್ ಕುಮಾರ್!

For Dai;y Updates Join Our whatsapp Group

Spread the love

ಮಂಡ್ಯ:- ಶ್ರೀರಂಗಪಟ್ಟಣದ ಕಿರಂಗೂರು ಬನ್ನಿಮಂಟಪದಲ್ಲಿ ಇಂದು ಖ್ಯಾತ ನಟ ಡಾ|| ಶಿವರಾಜ್‌ಕುಮಾರ ಅವರು ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು.

ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶ್ರೀರಂಗಪಟ್ಟಣ ಶಾಸಕ ಹಾಗೂ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ಎ.ಬಿ ರಮೇಶ್ ಬಂಡಿಸಿದ್ದೇಗೌಡ, ಶಾಸಕರಾದ ಪಿ ರವಿಕುಮಾರ್, ದರ್ಶನ್ ಪುಟ್ಟಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಚಾಮುಂಡೇಶ್ವರಿ ವಿಗ್ರಹದ ಅಂಬಾರಿ ಹೊತ್ತ ಮಹೇಂದ್ರ ಗಾಂಭೀರ್ಯದೊಂದಿಗೆ ಬನ್ನಿಮಂಟಪ ಕಿರಂಗೂರಿನಿಂದ ಶ್ರೀರಂಗನಾಥ ಸ್ವಾಮಿ ದೇವಲಯದವರೆಗೆ ಸಾಗಿತು.

ಕಲಾತಂಡಗಳು ಹಾಗೂ ಸ್ಥಬ್ಥಚಿತ್ರಗಳು ಭಾಗವಹಿಸಿ ಮೆರವಣಿಗೆಗೆ ವಿಶೇಷ ಮೆರಗು ನೀಡಿತು.

ಪೂಜಾ ಕುಣಿತ:
ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ ಗ್ರಾಮದ ಶ್ರೀ ಚಾಮುಂಡೇಶ್ವರಿ ಸಾಂಸ್ಕೃತಿಕ ಕಲಾತಂಡ, ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ಕೆ.ಬಿ.ಸ್ವಾಮಿ ತಂಡ, ಮದ್ದೂರು ತಾಲೂಕು ಕಡಿಲುವಾಗಿಲು ಗ್ರಾಮದ ಚೇತನ್.ಡಿ.ಸಿ ತಂಡ, ಬಾಬುರಾಯನಕೊಪ್ಪಲು ಪ್ರೇಮ್ ಕುಮಾರ್ ಬಿ.ಎನ್ ತಂಡ, ಶ್ರೀರಂಗಪಟ್ಟಣ ರವಿ.ಸಿ ತಂಡ ಮತ್ತು ಮಂಡ್ಯ ತಾಲೂಕು ಕಾರಸವಾಡಿ ವಿಕಾಸ್ ಕೆ.ಎಸ್ ತಂಡ ಭಾಗವಹಿಸಿತು.

ವೀರಗಾಸೆ:
ಬಾಬುರಾಯನಕೊಪ್ಪಲು ಕಿರಣ್.ಎಚ್.ವಿ ತಂಡ, ಮಂಡ್ಯ ತಾಲೂಕು ಹುಳ್ಳೇನಹÀಳ್ಳಿ ಗ್ರಾಮದ ಚಂದನ ಡಿ.ಸಿ ತಂಡ, ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಗ್ರಾಮದ ವಿನಯ್.ಎಸ್ ತಂಡ, ಪಾಂಡವಪುರ ತಾಲೂಕು ದೊಡ್ಡಬೋಗನಹಳ್ಳಿ ಗ್ರಾಮ ರುದ್ರಸ್ವಾಮಿ ಡಿ.ವಿ ತಂಡ.

ಸೋಮನ ಕುಣಿತ:
ಮಂಡ್ಯ ತಾಲ್ಲೂಕು ಕಾರಸವಾಡಿ ಸಂತೋಷ್ ಕುಮಾರ್ ಕೆ.ಎಂ ತಂಡ, ನಾಗಮಂಗಲ ಹಳ್ಳಿಸಂದ್ರ ಗ್ರಾಮ ಎ.ವಿಕಾಸ್‌ಗೌಡ ತಂಡ, ದುದ್ದ ಹೋಬಳಿ ಮುದಗಂದೂರು ಗ್ರಾಮದ ದೇವಲಿಂಗಯ್ಯ ತಂಡ, ವಿಕಾಸ್ ಎಂಬಿ ತಂಡ, ನಾಗಮಂಗಲ ಸಿ ಎಸ್ ಮಂಜೇಶ ತಂಡ.

ಡೊಳ್ಳು ಕುಣಿತ:
ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ಜನ್ಮಭೂಮಿ ಜನಪದ ಕಲಾಸಂಘ, ಶ್ರೀರಂಗಪಟ್ಟಣ ತಾಲ್ಲೂಕು ಮೇಳಾಪುರ ಗ್ರಾಮ ಸುಮಂತ ಎಂ.ಸಿ ತಂಡ, ಕಾರಸವಾಡಿ ಗ್ರಾಮದ ಲೋಕೇಶ್.ಎಂ ತಂಡ.

ನಗಾರಿ/ತಮಟೆ:
ಶ್ರೀರಂಗಪಟ್ಟಣ ತಾಲೂಕು ನೀಲನಕೊಪ್ಪಲು ಸಿದ್ದಲಿಂಗಸ್ವಾಮಿ ತಂಡ, ಶ್ರೀರಂಗಪಟ್ಟಣ ತಾಲೂಕು ಅರಕೆರೆ ಗ್ರಾಮ ಹರ್ಷಕುಮಾರ್‌ಗೌಡ ತಂಡ, ಶ್ರೀರಂಗಪಟ್ಟಣ ಕೀರ್ತಿಕುಮಾರ್.ಆರ್ ತಂಡ, ಮಂಡ್ಯ ಕೊಪ್ಪಲು ಕಲಾತಂಡ, ಶ್ರೀರಂಗಪಟ್ಟಣ ತಾಲೂಕು ಗಾಂಧಿನಗರ ಅಶೋಕ.ಬಿ ಮತ್ತು ತಂಡ.

ನಂದಿದ್ವಜ ಕುಣಿತ:
ಮಂಡ್ಯ ತಾಲೂಕು ಕಾರಸವಾಡಿ ಜಗದೀಶ್ .ಎಂ ತಂಡ, ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ದ್ಯಾವಣ್ಣ ತಂಡ.

ಗಾರುಡಿಗೊಂಬೆ:
ಮಂಡ್ಯ ತಾಲೂಕು ಕಾರಸವಾಡಿ ಸಿದ್ದೇಗೌಡ ತಂಡ ಜನಪದ ಕಲಾತಂಡ.

ಚಿಲಿಪಿಲಿ ಗೊಂಬೆ:
ಮದ್ದೂರು ತಾಲೂಕು ಬಿದರಹಳ್ಳಿ ಗ್ರಾಮದ ಶ್ರೀ ಕಬ್ಬಾಳಮ್ಮ ಜಾನಪದ ಕಲಾತಂಡ, ಮಳವಳ್ಳಿ ತಾಲೂಕು ಮಾರನಹಳ್ಳಿ ಗ್ರಾಮ ಚಂದ್ರ ತಂಡ.

ಕೊಂಬು ಕಹಳೆ:
ಶ್ರೀರಂಗಪಟ್ಟಣ ತಾಲೂಕು ಕೊಡಿಯಾಲ ಪವನ್ ಕುಮಾರ್ ತಂಡ, ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ರೋಹಿತ್‌ಎಸ್ ತಂಡ, ಮಂಡ್ಯ ತಾಲೂಕು ಮಳೆಕೊಪ್ಪಲು ಗ್ರಾಮದ ನರಸಿಂಹ ಎಂ.ಸಿ ತಂಡ.

ಒನಕೆ ಕುಣಿತ:
ಶ್ರೀರಂಗಪಟ್ಟಣ ತಾಲೂಕು ಬಸವನಪುರ ಯೋಗೇಶ್ ತಂಡಮತ್ತು ದೊಡ್ಡಪಾಳ್ಯ ಕುಮಾರ್ ತಂಡ.

ದೊಣ್ಣೆ ವರಸೆ, ಕತ್ತಿವರಸೆ, ಬೆಂಕಿ ಭರಾಟೆ:
ಮಂಡ್ಯ ತಾಲ್ಲೂಕು ಕೊತ್ತತ್ತಿ ಗ್ರಾಮದ ಎಲೆ ತೋಟದ ಖ್ಯಾತಮ್ಮ ಯುವಕರ ಜಾನಪದ ಕಲಾತಂಡ.

ಮಹಿಳಾಪಟ ಕುಣಿತ:
ಮಂಡ್ಯ ತಾಲೂಕು ಕೀಲಾರ ಗ್ರಾಮ ಕ್ಷೀರಸಾಗರ ಮಿತ್ರ ಕೂಟ ಮತ್ತು ರಾಜಮ್ಮ.ಎನ್ ತಂಡ.

ಬ್ಯಾಂಡ್ ಸೆಟ್:
ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮಹೇಶ ಸಿ ತಂಡ.

ನಾದಸ್ವರ:
ಶ್ರೀರಂಗಪಟ್ಟಣ ಅಜಯ್.ಕೆ ತಂಡ.

ಮಹಿಳಾ ಕೋಲಾಟ:
ಹೊಸಗಾವಿ ಶ್ರೀ ವಿನಾಯಕ ಮಹಿಳಾ ಕೋಲಾಟ ತಂಡ.

ಸ್ಥಬ್ದ ಚಿತ್ರಗಳು ರೇಷ್ಮೆ ಇಲಾಖೆಯಿಂದ ರೇಷ್ನೆ ಹುಳು ಸಾಕಾಣಿಕೆ ಹಾಗೂ ಅದರ ಉತ್ಪನ್ನಗಳು, ವಿದ್ಯಾ ಭಾರತಿ ಶಾಲೆಯಿಂದ ನವ ದುರ್ಗಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೃಹ ಲಕ್ಷ್ಮಿ ಯೋಜನೆ, ಶಾಲಾ ಶಿಕ್ಷಣ ಇಲಾಖೆಯಿಂದ ಜ್ಞಾನಪೀಠ ಪ್ರಶಸ್ತಿ ವಿಜೇತರು ಹಾಗೂ ಶಿಕ್ಷಣ ಇಲಾಖೆ ಸೌಲಭ್ಯದ ಬಗ್ಗೆ ಸ್ಥಬ್ದ ಚಿತ್ರ ಸೇರಿದಂತೆ ಕೃಷಿ, ತೋಟಗಾರಿಕೆ, ಖಾದಿ ಮತ್ತು ಗ್ರಾಮೋದ್ಯೋಗ, ಆರೋಗ್ಯ, ಅಗ್ನಿ ಶಾಮಕ ಇಲಾಖೆ ಹಾಗೂ ಭಗವಾನ್ ಬುದ್ಧ ಕುರಿತು ಸ್ಥಬ್ಧ ಚಿತ್ರಗಳು ಪಾಲ್ಗೊಂಡು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!