ದರ್ಶನ್ ಗೆ ಜಾಮೀನು ಸಿಕ್ಕಿರೋದು ಖುಷಿ ವಿಚಾರ: ಡೈರೆಕ್ಟರ್ ತರುಣ್ ಸುಧೀರ್!

0
Spread the love

ಬೆಂಗಳೂರು:- ದರ್ಶನ್ ಗೆ ಜಾಮೀನು ಸಿಕ್ಕಿರೋದು ಖುಷಿ ವಿಚಾರ ಎಂದು ಡೈರೆಕ್ಟರ್ ತರುಣ್ ಸುಧೀರ್ ಹೇಳಿದ್ದಾರೆ.

Advertisement

ದರ್ಶನ್ ಗೆ ಹೈಕೋರ್ಟ್ ನಿಂದ ಜಾಮೀನು ಸಿಗುತ್ತಿದ್ದಂತೆ ಮಾತನಾಡಿದ ಡೈರೆಕ್ಟರ್ ತರುಣ್ ಸುಧೀರ್, ಹನುಮ ಜಯಂತಿ ದಿನ ದರ್ಶನ್ ಅವರಿಗೆ ಬೇಲ್ ಸಿಕ್ಕಿದೆ. ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ ಟ್ರೀಟ್‌ಮೆಂಟ್ ಕೂಡ ನಡೆಯುತ್ತಿದೆ. ನಮಗೆ ಅವರ ಆರೋಗ್ಯ ಮುಖ್ಯ, ಮೊದಲು ಚೇತರಿಸಿಕೊಂಡು ಬರಲಿ ಎಂದಿದ್ದಾರೆ. ಈ ಪ್ರಕರಣದಿಂದ ಆರೋಪಮುಕ್ತರಾಗಿ ಹೊರಬಂದರೆ ನಮ್ಮಷ್ಟು ಖುಷಿ ಯಾರಿಗೂ ಇಲ್ಲ ಎಂದರು.

ದರ್ಶನ್‌ಗೆ ದೊಡ್ಡ ಫ್ಯಾನ್ ಬೇಸ್ ಇದೆ. ಅವರಿಗೆ ಬೇಲ್ ಸಿಕ್ಕಿರೋದು ಎಲ್ಲರಿಗೂ ಖುಷಿ ಇದೆ. ದರ್ಶನ್ ಜೈಲಿನಿಂದ ಹೊರಗೆ ಬರಲಿ ಅಂತ ಫ್ಯಾನ್ಸ್ ಹರಕೆ ಹೊತ್ತಿದ್ದರು. ನಾನು ಹರಕೆ ಹೊತ್ತಿರೋದನ್ನು ಹೇಳಿಕೊಳ್ಳಬಾರದು. ರೇಣುಕಾಸ್ವಾಮಿ ತಂದೆಯ ಪರಿಸ್ಥಿತಿ ಬಗ್ಗೆ ನಾನೇನು ಹೇಳೋದಕ್ಕೆ ಆಗಲ್ಲ ಎಂದರು.

ಇನ್ನೂ ಕನ್ನಡ ಚಿತ್ರರಂಗದಲ್ಲಿ 200ರಿಂದ 300 ಕೋಟಿ ರೂ. ವಹಿವಾಟು ನಡೆಸುವ ನಾಯಕ ನಟ ದರ್ಶನ್. ಚಿತ್ರರಂಗಕ್ಕೆ ಅವರ ಬಿಡುಗಡೆಯಿಂದ ಒಳ್ಳೆಯದಾಗುತ್ತದೆ. ಇನ್ನೂ ‘ಡೆವಿಲ್’ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ ಎಂದರು.


Spread the love

LEAVE A REPLY

Please enter your comment!
Please enter your name here