ನಿನ್ನ ಯೋಗ್ಯತೆ ಏನು ಅಂತ ನನಗೆ ಗೊತ್ತಾಗಿದೆ: ಉಗ್ರಂ ಮಂಜು ವಿರುದ್ಧ ತಿರುಗಿಬಿದ್ದ ಮೋಕ್ಷಿತಾ!

0
Spread the love

ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಯುವರಾಣಿ ಆಗಿರುವ ಮೋಕ್ಷಿತಾ ಅವರು, ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದಿದ್ದಾರೆ.

Advertisement

ಬಿಗ್​ಬಾಸ್ ಮನೆಯಲ್ಲಿ ಈ ವಾರ ‘ರಾಜ-ರಾಣಿ’ ಟಾಸ್ಕ್ ನಡೆದಿದೆ. ಉಗ್ರಂ ಮಂಜು ಅನ್ನು ಮಹಾರಾಜ ಮಾಡಿದ್ದ ಬಿಗ್​ಬಾಸ್ ಅವರಿಗೆ ಕೆಲವು ವಿಶೇಷ ಅಧಿಕಾರ ಕೊಟ್ಟಿದ್ದರು. ಅವರಿಗೆ ಮನೆಯ ಸದಸ್ಯರೆಲ್ಲರೂ ಗೌರವ ಕೊಡಬೇಕು, ಆಜ್ಞೆ ಪಾಲಿಸಬೇಕು ಎಂದಿದ್ದರು.

ಆದರೆ ಈಗ ಟ್ವಿಸ್ಟ್ ಒಂದನ್ನು ಕೊಟ್ಟಿದ್ದು, ಮೋಕ್ಷಿತಾ ಅನ್ನು ಮಹಾರಾಣಿ ಮಾಡಿದ್ದಾರೆ. ಈಗ ಮಹಾರಾಜ ಮತ್ತು ಮಹಾರಾಣಿ ನಡುವೆ ವೈಮನಸ್ಯ ಶುರುವಾಗಿದೆ. ಇಬ್ಬರೂ ಪರಸ್ಪರ ಜೋರಾಗಿಯೇ ಕಿತ್ತಾಡಿದ್ದಾರೆ.

ಯುವರಾಣಿ ಮೋಕ್ಷಿತಾ ಅವರನ್ನು ನೋಡಿದಾಗ ಎಲ್ಲರೂ ತಲೆ ಬಾಗಿ ನಮಸ್ಕಾರ ಮಾಡಬೇಕು ಅಂತ ಗೋಲ್ಡ್ ಸುರೇಶ್ ಅವರು ಗೌತಮಿ, ತ್ರಿವಿಕ್ರಮ್, ಧನರಾಜ್ ಮುಂದೆ ಹೇಳುತ್ತಾ ಇರುತ್ತಾರೆ. ಆಗ ಗೌತಮಿ ಆಗೋದಿಲ್ಲ. ಯಾರು ಹತ್ತಿರ ತಲೆ ಬಗ್ಗಿಸಲಿ, ತಲೆ ಬಗ್ಗಿಸಿದ ದಿನ ನಾವು ಅವರನ್ನು ಒಪ್ಪಿಕೊಂಡಂತೆ ಲೆಕ್ಕ ಅಂತ ಹೇಳಿದ್ದಾರೆ.

ಆಗ ಮಂಜಣ್ಣ ನಾಲಿಗೆಗೆ ಮೆತ್ತಿಕೊಂಡು, ನರಿಯ ಕಣ್ಣೀರು ಹಾಕಿ ಆಡಿದ್ದು ಆಟವಲ್ಲ. ಯುವರಾಣಿ ಪಟ್ಟ ನಾನು ಕೊಟ್ಟಿರುವ ಭಿಕ್ಷೆ ಅಂತ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಕೋಪಗೊಂಡ ಮೋಕ್ಷಿತಾ ನೀವು ಕೊಟ್ಟಿದ್ದಲ್ಲ ಬಿಗ್ ಬಾಸ್ ಕೊಟ್ಟಿರೋ ಭಿಕ್ಷೆ ಅಂತ ಜೋರಾಗಿ ಕಿರುಚಾಡಿದ್ದಾರೆ. ಯಾರ ಯಾರ ಯೋಗ್ಯತೆ ಏನು ಎಂಬುದು ಗೊತ್ತಿದೆ ಎಂದು ಮಂಜು ಮೋಕ್ಷಿತಾಗೆ ಟಾಂಗ್ ಕೊಟ್ಟಿದ್ದಾರೆ.

ಅದಕ್ಕೆ ನಿನ್ನ ಯೋಗ್ಯತೆ ಏನು ಎಂಬುದು ನನಗೂ ಗೊತ್ತಿದೆ ಎಂದು ಮೋಕ್ಷಿತಾ ತಿರುಗೇಟು ಕೊಟ್ಟಿದ್ದಾರೆ. ‘ಆಕಾಶದಲ್ಲಿ ನೀ ದೀಪವಾದೆ’ ಎಂದು ಮೋಕ್ಷಿತಾ ಹಾಡಿದ ಹಾಡನ್ನೇ ಹಾಡುತ್ತಾ ಮಂಜು ಕೆಣಕಿದ್ದಾರೆ. ಸಿಟ್ಟಿನಲ್ಲಿ ಥೂ ಎಂದು ಮಂಜುಗೆ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here