ಕೊಪ್ಪಳ: ಪೋಕ್ಸೋ ಸರಿಯಾಗಿ ತನಿಖೆಯಾದ್ರೆ ಯಡಿಯೂರಪ್ಪ ಜೈಲಿಗೆ ಹೋಗ್ತಾನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೆ ಕಿಡಿಕಾರಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮಾತು ಕೇಳಿ ಹೈಕಮಾಂಡ್ ಉಚ್ಛಾಟನೆ ಮಾಡಿದ್ದಾರೆ.
ಬಿಜೆಪಿ ಹಿಂದುಗಳ ಪರವಾಗಿಲ್ಲ, ಪೋಕ್ಸೊದಲ್ಲಿ ಸರಿಯಾದ ತನಿಖೆಯಾದರೆ ಯಡಿಯೂರಪ್ಪ ಜೈಲಿಗೆ ಹೋಗುತ್ತಾನೆ. ನಾನು ರಾಜ್ಯ ಸುತ್ತುತ್ತೇನೆ, ಯಾವುದೇ ಕೆಲಸವಾಗುತ್ತಿಲ್ಲ. ಯಡಿಯೂರಪ್ಪ ಮೋಸ ಮಾಡಿದ್ದಾನೆ. ವೀರಶೈವ ಲಿಂಗಾಯತ ಮೀಸಲಾತಿ ತಪ್ಪಿಸಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಡ್ರಗ್ ಹಿಡಿಯುತ್ತೇನೆ ಎಂದ ಐಪಿಎಸ್ ಅಧಿಕಾರಿ ಇದ್ದಾನೆ, ದುಡ್ಡು ಹೋಡೆಯುವದಕ್ಕೆ ಹೋಗಿ ಹಣ ಮಾಡಿಕೊಂಡಿದ್ದಾನೆ. ಕಾಂಗ್ರೆಸ್ ನ ಮಹಾನಾಯಕ, ಬಿಜೆಪಿಯ ಮಹಾ ಕಳ್ಳ ಸೇರಿ ರಮೇಶ್ ಜಾರಕಿಹೊಳಿ ಜೀವನ ಹಾಳು ಮಾಡಿದ್ರು ಎಂದು ಕಿಡಿಕಾರಿದರು. ಚನ್ನಮ್ಮ. ರಾಯಣ್ಣ ಹಾಗು ಅಂಬೇಡ್ಕರ್ ಎಲ್ಲರನ್ನೊಳಗೊಂಡ ಪಕ್ಷ ಆರಂಭವಾಗುತ್ತದೆ ಎಂದು ಹೇಳಿದ್ದಾರೆ.