ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ಅಡವೀಂದ್ರ ಸ್ವಾಮಿಮಠದಲ್ಲಿ ಪ್ರತಿ ತಿಂಗಳು ನಡೆಯುವ ಮಾಸಿಕ ಶಿವಾನುಭವ ಗೋಷ್ಠಿಯು ಜನತೆಯಲ್ಲಿ ವೈಚಾರಿಕತೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಮೂಡಿಸುತ್ತ ಯಶಸ್ವಿಯಾಗಿ ಮುನ್ನಡೆದಿದೆ ಎಂದು ನಂದಿವೇರಿಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.
ಗದುಗಿನ ಅಡವೀಂದ್ರ ಸ್ವಾಮಿಮಠದಲ್ಲಿ ನಡೆದ 325ನೇ ಮಾಸಿಕ ಶಿವಾನುಭವ ಗೋಷ್ಠಿ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಶೃದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಿವಾನುಭವ ಸಮಿತಿಯ ನೂತನ ಪದಾಧಿಕಾರಿಗಳು ಶ್ರೀಮಠದ ಧರ್ಮದರ್ಶಿ ವೇ.ಮೂ. ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಅವರ ಮಾರ್ಗದರ್ಶನದಲ್ಲಿ ಜನಸಮುದಾಯಕ್ಕೆ ಉಪಯುಕ್ತ, ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದರು.
ಡಾ. ಎಸ್.ಬಿ. ಶೆಟ್ಟರ ಅವರು ದಿ.ಗಂಗಾಧರ ಕೋಟಿ ಕುರಿತು ನುಡಿ ನಮನ ಸಲ್ಲಿಸಿ ಕೋಟಿ ಅವರ ಸಮಾಜಮುಖಿ ಕಾರ್ಯಗಳನ್ನು, ದಾನಗುಣವನ್ನು ಬಣ್ಣಿಸಿ ಕೋಟಿ ಅವರು ಕಾರ್ಯ ಸಾಧನೆಗಳು ಅವರನ್ನು ಜೀವಂತಗೊಳಿಸಿವೆ ಎಂದರು.
ಪಂ.ರಾಜಗುರು ಗುರುಸ್ವಾಮಿ ಕಲಿಕೇರಿ ಲಿಂ. ಗಂಗಾಧರ ಕೋಟಿ ಅವರ ಸಮಾಜಮುಖಿ ಕಾರ್ಯಗಳನ್ನು ವಿವರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವ್ಹಿ.ಎಂ. ಕುಂದ್ರಾಳಹಿರೇಮಠ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿಕ್ಷಕರಾಗಿ ಸೇವಾ ನಿವೃತ್ತರಾದ ಕುಂದ್ರಾಳಹಿರೇಮಠ ಅವರನ್ನು ದಂಪತಿ ಸಮೇತ ಸನ್ಮಾನಿಸಲಾಯಿತು.
ಸಮ್ಮುಖ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ವೇ.ಮೂ. ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಮಾತನಾಡಿ, ಅಡವೀಂದ್ರ ಮಠ, ಅನ್ನಪೂರ್ಣೆಶ್ವರಿ ಮಂದಿರ ಈ ಭಾಗದ ಭಕ್ತರ ಶೃದ್ಧಾಕೇಂದ್ರವಾಗಿದೆ. ಶಿವಾನುಭವ ಗೋಷ್ಠಿಗಳ ಮೂಲಕ ಧರ್ಮ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಿಂದ ಜನತೆಯಲ್ಲಿ ಜಾಗೃತಿ ಮೂಡಿಸುತ್ತ ಬಂದಿದೆ. ಶಿವಾನುಭವ ಸಮಿತಿಯ ಹಾಗೂ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಕ್ರಿಯಾಶೀಲತೆಯಿಂದ ಕಾರ್ಯ ಮಾಡುತ್ತ ಶ್ರೀಮಠದ ಘನತೆ ಗೌರವವನ್ನು ವೃದ್ಧಿಸಿದ್ದಾರೆ ಎಂದರು.
ಅತಿಥಿಗಳಾಗಿ ಸುಶೀಲಾ ಗಂಗಣ್ಣ ಕೋಟಿ, ಸಿದ್ಧಲಿಂಗಪ್ಪ ಕೋಟಿ, ಅಕ್ಕಮಹಾದೇವಿ ಕೋಟಿ ಆಗಮಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಎ.ಬಿ. ರಡ್ಡೇರ, ನಿವೃತ್ತ ಶಿಕ್ಷಕಿ ಶಾರದಾ ಗುರಿಕಾರ, ನಾಗರಾಜ ಗುರಿಕಾರ ಅವರಿಗೆ ಶ್ರೀಗುರು ರಕ್ಷೆ ಜರುಗಿತು.
ಸಿದ್ಧಣ್ಣ ಜವಳಿ ಸ್ವಾಗತಿಸಿದರು, ಪ್ರಕಾಶ ಬಂಡಿ ನಿರೂಪಿಸಿದರು ಕೊನೆಗೆ ಜಿ.ಬಿ. ತೋಟಿಗೇರ ವಂದಿಸಿದರು. ಪ್ರಸಾದ ಸೇವೆಯನ್ನು ಸಿದ್ದಲಿಂಗಯ್ಯ ಕುಂದ್ರಾಳಹಿರೇಮಠ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿ.ಎಂ. ಬಿಳೆಯಲಿ, ಪ್ರೊ. ಕೆ.ಎಚ್. ಬೇಲೂರ, ಎಸ್.ಎಸ್. ಪಾಟೀಲ, ಎಲ್.ಎಸ್. ನೀಲಗುಂದ, ಜಿ.ಎಂ. ಯಾನಮಶೆಟ್ಟಿ, ಬಿ.ಎಚ್. ಗರಡಿಮನಿ, ಬಸವರಾಜ ಸಂಕನೂರ, ನಿಂಗಪ್ಪ ಬಳಿಗಾರ, ಡಾ. ರಾಜೇಂದ್ರ ಗಡಾದ, ಬಸವರಾಜ ಗಿಡ್ನಂದಿ, ಐ.ಕೆ. ಬಲೂಚಗಿ, ಆರ್.ಎಫ್. ಅಗಸಿಮನಿ, ಜಿ.ಎಫ್. ಬಿದರಿ, ಬಿ.ಎಲ್. ಹೊಸಳ್ಳಿಮಠ, ಪ್ರೊ. ಬಿ.ಬಿ. ಪಾಟೀಲ, ಸಿದ್ಧಣ್ಣ ಜವಳಿ, ಮಾರುತಿ ಹೆಬ್ಬಾರೆ, ಎಂ.ಕೆ. ಹೊಂಬಾಳಿಮಠ, ಸಿ.ಬಿ. ಹಿರೇಮಠ, ಜಿ.ಬಿ. ನಿಡಗುಂದಿ, ಪ್ರಭುಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ, ಫಕೀರಯ್ಯ ಹಿರೇಮಠ, ಬಿ.ವ್ಹಿ. ಹುಡೇದ, ಯಶೋದಾ ಗಿಡ್ನಂದಿ, ಪ್ರಮೀಳಾದೇವಿ ಬಳಿಗಾರ, ಶಾಂತಾ ಬಾಕಳೆ, ಮಂಗಲಾ ಯಾನಮಶೆಟ್ಟಿ, ಶಾಂತಾ ಸಂಕನೂರ, ಕಸ್ತೂರಿ ಭಾಂಡಗೆ, ಗೀತಾ ಹೂಗಾರ ಮುಂತಾದವರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಶಿವಾನುಭವ ಸಮಿತಿಯ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಅಧ್ಯಕ್ಷರಾಗಿ ಡಾ. ಎಸ್.ಕೆ. ನಾಲತ್ವಾಡಮಠ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಬಿ. ತೋಟಿಗೇರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿನಾಯಕ ಸಜ್ಜನ, ಕೋಶಾಧ್ಯಕ್ಷರಾಗಿ ಯು.ಆರ್. ಭೂಸನೂರಮಠ ಅವರು ತಮ್ಮ ಕಾರ್ಯಕಾರಿ ಮಂಡಳಿಯ ಸದಸ್ಯರೊಂದಿಗೆ ಸೇವಾದೀಕ್ಷೆ ಸ್ವೀಕರಿಸಿದರು.
Advertisement