ವಿಜಯಸಾಕ್ಷಿ ಸುದ್ದಿ, ಗದಗ : ಜಯ ಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ, ರಾಜ್ಯಾಧ್ಯಕ್ಷ ಜೆ. ಶ್ರೀನಿವಾಸ್ ನೇತತ್ವದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹಾಲ್ಲಪ್ಪ ವರವಿ ಹಾಗೂ ಕಾರವಾರ ಜಿಲ್ಲಾ ಅಧ್ಯಕ್ಷ ದೀಲಿಪ್ ಕೆ.ಅರ್ಗೆಕರ್ ಅವರ ಆದೇಶದ ಮೇರೆಗೆ ಯಲ್ಲಾಪುರ ತಾಲೂಕಾಧ್ಯಕ್ಷ ರಾಘು ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಮಾವಿನಕಟ್ಟಾ (ಭರತನಹಳ್ಳಿ ಗ್ರಾಮ) ಗ್ರಾಮ ಘಟಕವನ್ನು ಉದ್ಘಾಟಿಸಲಾಯಿತು.
ತಾಲೂಕು ಸಮಿತಿಗೆ ಸತೀಶ್ ಕೆ.ಗೌಡ್ರ, ಗ್ರಾಮ ಘಟಕದ ಗೌರವ ಅಧ್ಯಕ್ಷರನ್ನಾಗಿ ಅರುಣ್ ಕುಮಾರ್ ಗೌಡ್ರ, ಅಧ್ಯಕ್ಷರಾಗಿ ಕಾರ್ತಿಕ್ ಕೆ.ನಾಯ್ಕ, ಅಶೋಕ ಗೌಡರ, ಬಸವರಾಜ್ ಹಿರೇಮಠ್, ಫಕೀರ್ ಬೋವಿವಡ್ಡರ್, ಈರಪ್ಪ ಬೋವಿವಡ್ಡರ, ಮಹಾದೇವ ಹೆಗಡೆ, ಪ್ರಕಾಶ್ ಜೋಗಿ, ಚೇತನ್ ವಡ್ಡರ, ಸಂದೀಪ್ ಬೋವಿವವಡ್ಡರ, ಚೇತನ ವಡ್ಡರ, ಹನುಮಂತ ಜೋಗಿ, ರಾಮು ಬೋವಿವಡ್ಡರ, ಅನಂತ್ ಸಿದ್ದಿ, ಕಿರಣ ಡೌರಿ, ನಾಗರಾಜ್ ಪಟಗಾರ, ಗಜು ನಾಯ್ಕ, ವಿಶ್ವನಾಥ ನಾಯ್ಕ, ವರದರಾಜ ಹೆರೂರ, ಸಂಜು ವಡ್ಡರ, ರೊಹೀತ್ ನಾಯ್ಕ, ಲೊಕೇಶ ವಡ್ಡರ, ಕಮಲಾಕರ ನಾಯ್ಕ, ಹನುಮಂತ ಮಾದರ, ನಾರಾಯಣ ಡೌರಿ, ಸತೀಶ್ ಮಾರಾಠಿ, ಮೋಹನ ಶೆಟ್ಟಿ ಇವರನ್ನು ಆಯ್ಕೆ ಮಾಡಲಾಯಿತು.