ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಆತ್ಮಹತ್ಯೆ: ಹರಿಯಾಣ ಡಿಜಿಪಿಗೆ ರಜೆ

0
Spread the love

ಗುರುಗ್ರಾಮ:- ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಅವರು ಅಕ್ಟೋಬರ್ 7ರಂದು ಚಂಡೀಗಢದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು.

Advertisement

ಅವರು ಡಿಜಿಪಿ ಸೇರಿದಂತೆ ಕೆಲ ಅಧಿಕಾರಿಗಳಿಂದ ಜಾತಿ ಆಧಾರಿತ ಕಿರುಕುಳ ಅನುಭವಿಸಿದ್ದಾಗಿ 8 ಪುಟಗಳ ಸೂಸೈಡ್ ನೋಟಿನಲ್ಲಿ ಉಲ್ಲೇಖಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದ ಒತ್ತಡ ಹೆಚ್ಚಾಗುತ್ತಿದ್ದಂತೆ, ಹರಿಯಾಣ ಸರ್ಕಾರ ಡಿಜಿಪಿ ಶತ್ರುಜೀತ್ ಸಿಂಗ್ ಕಪೂರ್ ಅವರಿಗೆ ರಜೆ ನೀಡಿ, ಒ.ಪಿ. ಸಿಂಗ್ ಅವರನ್ನು ಇತ್ತೀಚಿನ ಜವಾಬ್ದಾರಿಗೆ ನೇಮಿಸಿದೆ.

ಪೂರಣ್ ಕುಮಾರ್ ಪತ್ನಿ ಅಮ್ನೀತ್ ಪಿ. ಕುಮಾರ್ ಹಿರಿಯ ಅಧಿಕಾರಿಗಳ ಬಂಧನಕ್ಕೆ ಒತ್ತಾಯಿಸುತ್ತಿದ್ದಾರೆ. ಬಂಧನೆಯ ತನಕ ಮರಣೋತ್ತರ ಪರೀಕ್ಷೆಗೆ ಸಹಕರಿಸಲು ನಿರಾಕರಿಸಿದ್ದಾರೆ. ಅವರ ಮೃತದೇಹ ಚಂಡೀಗಢದ ಪಿಜಿಐಎಂಇಆರ್ ಶವಾಗಾರದಲ್ಲಿ ಉಳಿಸಲಾಗಿದೆ.


Spread the love

LEAVE A REPLY

Please enter your comment!
Please enter your name here