ವಿಜಯಸಾಕ್ಷಿ ಸುದ್ದಿ ಹರಪನಹಳ್ಳಿ : ಗ್ರಾಮಗಳಲ್ಲಿ ಸೂಕ್ತ ಚರಂಡಿ ವ್ಯವಸ್ತೆ, ನಿವೇಶನಗಳ ನಿರ್ಮಾಣ ಸೇರಿದಂತೆ ಗ್ರಾಮಗಳ ಸಮಸ್ಯೆಗಳನ್ನು ಪರಿಶೀಲಿಸಿ ಶೀಘ್ರವೇ ಕಾಮಗಾರಿ ಪ್ರಾರಂಭಿಸಿ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಭೀಮಪ್ಪ ಲಾಳಿ ಸೂಚಿಸಿದರು.
Advertisement
ತಾಲೂಕಿನ ಅರಸೀಕೆರೆ ಗ್ರಾಮ ಪಂಚಾಯಿತಿಯಲ್ಲಿ ಜಮಾಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿನ ಮುಖ್ಯ ಸಮಸ್ಯೆಗಳಾದ ರಸ್ತೆ ನಿರ್ಮಾಣ, ದಿನವಹಿ ಸಂತೆ, ಆಟದ ಮೈದಾನ, ಕಸ ವಿಲೇವಾರಿ ಘಟಕ, ಕಚೇರಿಗಳಿಗೆ ವಾಹನದ ವ್ಯವಸ್ಥೆ ಹಾಗೂ 7.68 ಎಕರೆಯಲ್ಲಿ ಆಶ್ರಯ ಮನೆಗಳ ನಿರ್ಮಾಣ ಮಾಡಬೇಕು ಎಂದು ಸಂಬಂದಿಸಿದ ಅದಿಕಾರಿಗಳಿಗೆ ತಾಕೀತು ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಇನಾಯತ್ಉಲ್ಲಾ, ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ ವೈ.ಹೆಚ್, ಪಿಡಿಓ ಅಂಜಿನಪ್ಪ, ಮಂಜುನಾಥ, ಮಹಾಂತೇಶ್, ತಾಂತ್ರಿಕ ಸಂಯೋಜಕ ನಾಗರಾಜ್ ನಾಯ್ಕ, ಷಣ್ಮುಖಪ್ಪ. ಸಿ.ನಾಗರಾಜ ಮುಂತಾದವರಿದ್ದರು.