ಕಮಲ್ ಹಾಸನ್ ಕ್ಷಮೆ ಕೇಳಬೇಕು, ಇಲ್ಲಾಂದ್ರೆ ಸಿನಿಮಾ ರಿಲೀಸ್ ಮಾಡಲು ಬಿಡಲ್ಲ: ಶಾಸಕ ರವಿ ಗಣಿಗ

0
Spread the love

ಬೆಂಗಳೂರು: ಕಮಲ್ ಹಾಸನ್ ಕ್ಷಮೆ ಕೇಳಬೇಕು, ಇಲ್ಲಾಂದ್ರೆ ಸಿನಿಮಾ ರಿಲೀಸ್ ಮಾಡಲು ಬಿಡಲ್ಲ ಎಂದು ಶಾಸಕ ರವಿ ಗಣಿಗ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಮಲ್ ಹಾಸನ್ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದೆ ಹೋದರೆ ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ.

Advertisement

ವಾಣಿಜ್ಯ ಮಂಡಳಿಯಿಂದ ಬೆಣ್ಣೆ ಹಚ್ಚುವ ಮಾತು ಬೇಡ. ಕೂಡಲೇ ಸಿನಿಮಾ ಬ್ಯಾನ್ ಮಾಡಲಿ. ಇಲ್ಲದೆ ಹೋದರೆ ಸರ್ಕಾರ ಅವರ ಸಿನಿಮಾ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು. ರಮ್ಯ, ಶಿವರಾಜ್ ಕುಮಾರ್ ಯಾಕೆ ಮಾತನಾಡುತ್ತಿಲ್ಲ ಎಂದು ಗೊತ್ತಿಲ್ಲ.

ಕನ್ನಡದ ಅನ್ನ ತಿನ್ನೋರು ಕನ್ನಡದ ಬಗ್ಗೆ ಮಾತನಾಡಿದಾಗ ಅದನ್ನ ಖಂಡಿಸಬೇಕು. ಮೊದಲು ನಟರು ಬೆಣ್ಣೆ ಹಚ್ಚುವುದನ್ನು ಬಿಡಬೇಕು. ದರ್ಶನ್ ಖಂಡಿಸಿರುವುದನ್ನು ನೋಡಿದ್ದೇನೆ. ಬೇರೆಯವರು ಅದಕ್ಕೆ ಟಾಂಗ್ ಕೊಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದರು.

 


Spread the love

LEAVE A REPLY

Please enter your comment!
Please enter your name here